ಬಿಎಸ್ವೈ ನಾಲಿಗೆ ಕಳೆದುಕೊಂಡ ನಾಯಕ, ವಿಜಯೇಂದ್ರ ದಾರಿ ತಪ್ಪಿದ ಮಗ: ವಿಶ್ವನಾಥ್ | Janata news
ಹುಬ್ಬಳ್ಳಿ : ಯಡಿಯೂರಪ್ಪ ಕಾಮಧೇನು ಇದ್ದಂತೆ. ಅವರ ಜೀವ ವಿಜಯೇಂದ್ರನ ಕೈಯಲ್ಲಿದೆ. ಇದೀಗ ಯಡಿಯೂರಪ್ಪ ಅವರ ಪರಿಸ್ಥಿತಿ ನೋಡಿದರೆ, ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ ಎಂದು ತಲೆಬರಹ ನೀಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸನ್(ಪುತ್ರ) ಮತ್ತು ಫ್ಯಾಮಿಲಿ ಸ್ಟ್ರೋಕ್ನಿಂದ ಹಾಳಾಗಿವೆ. ಅದೇ ಹಾದಿಯಲ್ಲಿ ಈಗ ಬಿಜೆಪಿ ಕೂಡ ಸಾಗಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಸನ್ ಸ್ಟ್ರೋಕ್ ಆದರೆ ಏನೂ ನಷ್ಟವಿಲ್ಲ. ಆದರೆ ಬಿಜೆಪಿಯಂಥ ರಾಷ್ಟ್ರೀಯ ಪಕ್ಷದಲ್ಲಿ ಈ ಬೆಳವಣಿಗೆ ಸರಿಯಲ್ಲ. ವಿಜಯೇಂದ್ರ ಅವರಿಂದ ಬಿಜೆಪಿ ‘ಸನ್ ಸ್ಟ್ರೋಕ್’ಗೆ ಒಳಗಾಗಿದೆ. ಕುಟುಂಬ ರಾಜಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲಿಯಾಗುತ್ತಿದ್ದಾರೆ.
ನಾನೊಬ್ಬ ಲೇಖಕ. ಬರವಣಿಗೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ.ಬಿ.ಎಸ್. ಯಡಿಯೂರಪ್ಪ ನನಗಿಂತ ದೊಡ್ಡವರು. ಅವರಿಗೆ ಅಧಿಕಾರದ ಆಸೆ ಇರಬೇಕಾದರೆ ನನಗೆ ಇರಬಾರದಾ? ಎಂದು ಪ್ರಶ್ನಿಸಿದರು.
ನಾನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ. ಆದರೆ, ಜೈಲಿಗೆ ಹೋಗಬೇಕಾದ ಯೋಗೇಶ್ವರ ಸಚಿವರಾಗಿದ್ದಾರೆ. ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬರುವಾಗ ಮುಂಬೈನಲ್ಲಿ ಕೆಲ ದಿನಗಳ ಕಾಲ ಕಳೆದ ದಿನಗಳ ಬಗ್ಗೆ ಬಾಂಬೆ ದಿನಗಳು ಪುಸ್ತಕ ಬರೆಯುತ್ತೇನೆ. ಯಡಿಯೂರಪ್ಪ ಎನು ಮಾತು ಕೊಟ್ಟಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಲು ನಕಾರ. ಎಲ್ಲವನ್ನೂ ಪುಸ್ತಕದಲ್ಲಿ ಬಹಿರಂಗ ಪಡಿಸುತ್ತೇನೆ ಎಂದರು.
ಸಿಪಿ ಯೋಗೇಶ್ವರ್ ಯಾರು? ಅವರನ್ನ ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಏನಿತ್ತು? ಮುನಿರತ್ನಗೆ ಸಚಿವ ಸ್ಥಾನ ನೀಡುವುದು ಬಿಟ್ಟು ಯೋಗೇಶ್ವರ್ ಅವರಿಗೆ ಯಾಕೆ ಕೊಡಬೇಕಿತ್ತು? ನಾನು ಅಧಿಕಾರಕ್ಕೆ ಹಂಬಲಿಸಿದವನಲ್ಲ. ಸಾರಾ ಮಹೇಶ್ ಕೊಚ್ಚೆ ಗುಂಡಿ, ಕೊಚ್ಚೆ ಗುಂಡಿಗೆ ಕಲ್ಲು ಎಸೆದು ಹೊಲಸು ಮಾಡಿಕೊಳ್ಳಲು ನನಗಿಷ್ಟವಿಲ್ಲ ಎಂದಿದ್ದಾರೆ.
ನಾನು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ. ಮಾತಿನ ಮೇಲೆ, ನಡುವಳಿಕೆ ಮೇಲೆ ಯಾವುದೇ ಪಕ್ಷ ಉಳಿದಿಲ್ಲ. ಯಾವುದೇ ನಾಯಕರು ಮಾತು ಉಳಿಸಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರು ನನಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲಾ ಎಂಬುದು ಅವರೇ ಹೇಳಬೇಕು. ನಮಗೆ ಮಾತು ಕೊಟ್ಟಿದ್ದರು. ಅದು ಎನು ಎಂಬುದು ಅವರೇ ಬಹಿರಂಗಪಡಿಸಲಿ.