ಸಿಡಿ ಎಂಬುದು ಇಲ್ಲವೇ ಇಲ್ಲ, ಸಿಡಿ ಕೊಡಿ ಎಂದು ಮುಖ್ಯಮಂತ್ರಿ ಕೂಡ ಇಷ್ಟು ಧೈರ್ಯದಿಂದ ಹೇಳಿದ್ದಾರೆ: ಪ್ರಹ್ಲಾದ್ ಜೋಶಿ | Janata news
ಹುಬ್ಬಳ್ಳಿ : ಸಿಡಿ ವಿಚಾರ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೆದರಿಸುವುದು ಸರಿಯಲ್ಲ. ಅವರಲ್ಲಿ ಸಿಡಿ ಇಲ್ಲ. ಸುಖಾಸುಮ್ಮನೆ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಸ್ಥಾನ ಸಿಗದೆ ಇರುವವರು ತಮ್ಮ ಅಭಿಪ್ರಾಯವನ್ನು ಪಕ್ಷದ ಉಸ್ತುವಾರಿ, ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದು. ಇದನ್ನು ಸಿಎಂ ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮದವವರ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಿಡಿ ಎಂಬುದು ಇಲ್ಲವೇ ಇಲ್ಲ. ಇರುವುದು ನಿಜವೇ ಆದರೆ ಅದನ್ನು ಇಟ್ಟುಕೊಂಡು ಬೆದರಿಸುವ ತಂತ್ರ ಯಾಕೆ? ಧೈರ್ಯವಿದ್ದರೆ ಸಿಡಿ ಬಿಡುಗಡೆ ಮಾಡಿ. ಸಿಡಿ ಕೊಡಿ ಎಂದು ಮುಖ್ಯಮಂತ್ರಿ ಕೂಡ ಇಷ್ಟು ಧೈರ್ಯದಿಂದ ಹೇಳಿದ್ದಾರೆ ಅಂದರೆ ಸಿಡಿ ಬಗ್ಗೆ ಹೇಳುವವರಲ್ಲಿ ಸಿಡಿ ಇಲ್ಲವೇ ಇಲ್ಲ. ರಾಜಕಾರಣ ದಲ್ಲಿ ನಾಯಕರಿಗೆ ಮಹತ್ವಾಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಬಹಿರಂಗವಾಗಿ ಹೇಳಿಕೆ ನೀಡೊದು ತಪ್ಪು ಎಂದು ಜೋಶಿ ಹೇಳಿದರು.