ಸಚಿವ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ! | Janata news
ಬೆಂಗಳೂರು : ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ. ಆರ್.ಟಿ ನಗರದ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದ ಹೆಚ್ಡಿಕೆ, ಅರ್ಧ ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದರು.
ನಂತರ ಮಾತನಾಡಿದ ಅವರು, ಆ ಕಾಲದಿಂದಲೂ ನಮ್ಮ ಸ್ನೇಹ ಇದೆ. ರಾಜಕೀಯ ಬೆಳವಣಿಗೆ ಬಗ್ಗೆ ನಾವಿಂದು ಚರ್ಚೆ ಮಾಡಿಲ್ಲ ಎಂದರು. ಜೆಡಿಎಸ್ಗೆ ಬರುವಂತೆ ಮನವೊಲಿಸಲು ಬಂದಿಲ್ಲ, ನನ್ನ ಕ್ಷೇತ್ರದ ಪೋಸ್ಟಿಂಗ್ ವಿಚಾರ ಚರ್ಚೆ ಮಾಡಿದ್ದೇವೆ. ಅದು ಬಿಟ್ಟು ಬೇರೇನು ಚರ್ಚೆ ಆಗಿಲ್ಲ ಎಂದು ಹೆಚ್ಡಿಕೆ ಅವರು ಹೇಳಿದ್ದಾರೆ.
RELATED TOPICS:
English summary :HD Kumaraswamy