ರಾಜ್ಯ ಸಚಿವರ ಖಾತೆ ಹಂಚಿಕೆ : ಯಾರ್ಯಾರಿಗೆ ಯಾವ ಖಾತೆ ವಿವರ | Janata news
ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ನೂತನ ಏಳು ಮಂದಿ ಸಚಿವರ ಸೇರ್ಪಡೆಯಾಗಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು, ಕೆಲವು ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಖಾತೆಯಲ್ಲಿ ಮಹತ್ವದ ಬದಲಾವಣೆಗಳಲ್ಲಿ, ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಹೆಚ್ಚುವರಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಖಾತೆ ನೀಡಿದ್ದು, ಅವರ ಬಳಿಯಿದ್ದ ಬಂದರು ಹಾಗೂ ಮೀನುಗಾರಿಕೆ ಖಾತೆಯನ್ನು ಶ್ರೀ ಅಂಗಾರ ಅವರಿಗೆ ನೀಡಲಾಗಿದೆ. ಡಾ.ಕೆ.ಸುಧಾಕರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ನೀಡಲಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಬಳಿಯಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು, ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಇಂದು ಬಿಡುಗಡೆಯಾದ ಸಚಿವರ ಖಾತೆ ವಿವರ ಕೆಳಗಿನಂತಿದೆ,
ಉಮೇಶ್ ಕತ್ತಿ: ಆಹಾರ ಮತ್ತು ನಾಗರೀಕ ಪೂರೈಕೆ
ಶ್ರೀ ಅಂಗಾರ: ಬಂದರು ಹಾಗೂ ಮೀನುಗಾರಿಕೆ
ಬಸವರಾಜ ಬೊಮ್ಮಾಯಿ: ಗೃಹ ಹಾಗೂ ಕಾನೂನು ಮತ್ತು ಸಂಸದೀಯ ಇಲಾಖೆ
ಜೆ.ಸಿ ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ
ಸಿಸಿ ಪಾಟೀಲ್ : ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ
ಅರವಿಂದ್ ಲಿಂಬಾವಳಿ: ಅರಣ್ಯ
ಮುರುಗೇಶ್ ನಿರಾಣಿ: ಗಣಿ ಹಾಗೂ ಭೂ ವಿಜ್ಞಾನ
ಎಂಟಿಬಿ ನಾಗರಾಜ್: ಅಬಕಾರಿ
ಕೋಟಾ ಶ್ರೀನಿವಾಸ್ ಪೂಜಾರಿ: ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ
ಡಾ. ಕೆ ಸುಧಾಕರ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಆನಂದ್ ಸಿಂಗ್:- ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ
ಸಿಪಿ ಯೋಗೇಶ್ವರ್: ಸಣ್ಣ ನೀರಾವರಿ
ಪ್ರಭುಚೌಹ್ಹಾಣ್ : ಪಶುಸಂಗೋಪಣೆ
ಶಿವರಾಂ ಹೆಬ್ಬಾರ್ : ಕಾರ್ಮಿಕ
ಆರ್. ಶಂಕರ್: ಪೌರಾಡಳಿತ ಹಾಗೂ ರೇಷ್ಮೆ
ಕೆ. ಗೊಪಾಲಯ್ಯ: ತೋಟಗಾರಿಕೆ ಹಾಗೂ ಸಕ್ಕರೆ
ಕೆ. ಸಿ ನಾರಾಯಣ ಗೌಡ : ಯುವ ಜನ ಹಾಗೂ ಕ್ರೀಡೆ ಹಾಗೂ ಹಜ್ ಮತ್ತು ವಕ್ಫ್
ಬಾಕಿ ಉಳಿದ ಖಾತೆಗಳು ಸಿಎಂ ಯಡಿಯೂರಪ್ಪ ಅವರ ಬಳಿಯಲ್ಲಿ ಮುಂದುವರೆಯಲಿದೆ.