ಗಣರಾಜ್ಯೋತ್ಸವ ಪರೇಡ್: ರಾಜಪಥ್ನಲ್ಲಿ ವಿಜಯನಗರ ವೈಭವ | Janata news
ನವದೆಹಲಿ: : 72ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ರಾಜ್ಪಥ್ನಲ್ಲಿ ಪರೇಡ್ ನಡೆಯಿತು. ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು.
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ವಿಜಯನಗರ ಸಾಮ್ರಾಜ್ಯ ಥೀಮ್ನ ಸ್ತಬ್ಧಚಿತ್ರವನ್ನ ಕರ್ನಾಟಕ ಪ್ರದರ್ಶಿಸಿತು. ವಿಜಯನಗರ ಸಾಮ್ರಾಜ್ಯದ ಅರಸರಾಗಿದ್ದ ಶ್ರೀಕೃಷ್ಣದೇವರಾಯರ ಮೂರ್ತಿಯನ್ನ ಪ್ರತಿಷ್ಠಾಪಿಸಲಾದ ಸಾರೋಟ್ನಲ್ಲಿ ಉಗ್ರನರಸಿಂಹ ಹಾಗೂ ಬಳ್ಳಾರಿ ಕನಕದುರ್ಗಮ್ಮ ಮೂರ್ತಿ ಸ್ತಬ್ಧಚಿತ್ರದಲ್ಲಿದ್ದು, ಕೆಂಪು ಕೋಟೆಯಲ್ಲಿ ಗಮನ ಸೆಳೆಯಿತು.
ಫ್ರಾನ್ಸ್ ದೇಶದಿಂದ ಖರೀದಿಸಿರುವ ರಫೇಲ್ ಯುದ್ದ ವಿಮಾನಗಳು ಮೊದಲ ಬಾರಿ ಪರೇಡ್ ನಲ್ಲಿ ಭಾಗವಹಿಸಿದವು. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಪ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಪರೇಡ್ ನಲ್ಲಿ ಭಾಗವಹಿಸಿದರು.
ಭಾರತ-ಬಾಂಗ್ಲಾದೇಶದ 50 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಗೌರವಿಸಲು ಮತ್ತು ಆಚರಿಸಲು, ವಿಶೇಷ ಬಾಂಗ್ಲಾದೇಶದ ತ್ರಿ-ಸೇವಾ ದಳ ಶೋನೊ ಶಕ್ತಿ ಮುಜಿಬೊರೆರ್ ಮೆರವಣಿಗೆಗೆ ಇದೇ ಮೊದಲ ಸಲ ಅವಕಾಶ ನೀಡಲಾಗಿತ್ತು.
ಗುಜರಾತಿನ ಸೂರ್ಯ ದೇವಾಲಯ, ಪಲ್ಲವ ರಾಜವಂಶದ ತೀರದ ತಮಿಳುನಾಡಿನ ದೇವಾಲಯ, ಉತ್ತರಾಖಂಡದ ಕೇದಾರನಾಥ, ಆಂಧ್ರಪ್ರದೇಶಕ್ಕೆ ಸೇರಿದ ವಿಜಯನಗರದ ಶಿವಲಿಂಗ ಮುಂತಾದ ಸಾಂಸ್ಕೃತಿಕ ಮಹತ್ವದ ಪಾರಂಪರಿಕ ದೇವಾಲಯಗಳು, ಶೀಘ್ರದಲ್ಲೇ ನಿರ್ಮಾಣವಾಗಲಿರುವ ಅಯೋಧ್ಯೆಯ ರಾಮ ಮಂದಿರ, ಈ ವರ್ಷ ರಾಜ್ಯಗಳನ್ನು ಪ್ರತಿಬಂಬಿಸುವ ಉತ್ಸವದಲ್ಲಿದ್ದವು.