ದೆಹಲಿ ರೈತರ ಗಲಭೆ : 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, 200 ಜನರನ್ನು ವಶಕ್ಕೆ, ಎಫ್ಐಆರ್ ದಾಖಲು | Janata news
ನವದೆಹಲಿ : ನಿನ್ನೆ ಜನವರಿ 26ರ ಮಂಗಳವಾರ ದೆಹಲಿಯಲ್ಲಿ ಪ್ರತಿಭಟನಾ ನಿರತ ಗಣರಾಜ್ಯೋತ್ಸವದ ರೈತರ ಟ್ರಾಕ್ಟರ್ ರ್ಯಾಲಿ ತನ್ನ ಯೋಜಿತ ಮಾರ್ಗದಿಂದ ಬದಲಾವಣೆ ಮಾಡಿ ಅಡ್ಡಾದಿಡ್ಡಿ ಟ್ರ್ಯಾಕ್ಟರ್ ಓಡಿಸಿದ್ದು, ಕೆಂಪು ಕೋಟೆ ಮತ್ತು ಐಟಿಒ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಘರ್ಷಣೆಗೆ ಕಾರಣವಾಯಿತು ಹಾಗೂ ಹಲವಾರು ಭಾಗಗಳಲ್ಲಿ ಅವ್ಯವಸ್ಥೆ ಮತ್ತು ಹಿಂಸಾಚಾರ ಭುಗಿಲೆದ್ದಿತು.
300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಇಪ್ಪತ್ತೆರಡು ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರು ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ 395(ಡಕೊಯಿಟಿ), 397(ದರೋಡೆ, ಅಥವಾ ಡಕೊಯಿಟಿ, ಸಾವು ಅಥವಾ ಘೋರ ನೋವನ್ನುಂಟುಮಾಡುವ ಪ್ರಯತ್ನ), 120ಬಿ(ಕ್ರಿಮಿನಲ್ ಪಿತೂರಿಯ ಶಿಕ್ಷೆ) ಮತ್ತು ಇತರ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗವು ತನಿಖೆ ನಡೆಸಲಿದೆ.
ನಿನ್ನೆ ನಗರದಲ್ಲಿ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 200 ಜನರನ್ನು ವಶಕ್ಕೆ ಪಡೆದಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು, ಎಂದು ಪೊಲೀಸರು ತಿಳಿಸಿದ್ದಾರೆ.
ಐಟಿಒ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನಾ ನಿರತ ರೈತನೊಬ್ಬ ಬ್ಯಾರಿಕೆಡ್ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಯತ್ನಿಸಿ, ತನ್ನ ಟ್ರಾಕ್ಟರ್ ಪಲ್ಟಿಯಾದ ನಂತರ ಸಾವನ್ನಪ್ಪಿದ್ದನು, ಈ ಸಂಗತಿಯನ್ನು ಕೆಲವು ಕಿಡಿಗೇಡಿಗಳು, ಪೊಲೀಸರು ಗುಂಡಿಕ್ಕಿ ಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.
ನಿನ್ನೆ ನಗರದಲ್ಲಿ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 200 ಜನರನ್ನು ವಶಕ್ಕೆ ಪಡೆದಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು, ಎಂದು ಎಏನ್ಐ ವರದಿ ಮಾಡಿದೆ
ಏತನ್ಮಧ್ಯೆ, ಪ್ರತಿಭಟನಾಕಾರಿ ರೈತ ಸಂಘಗಳಲ್ಲಿ ಮುಖ್ಯ ಸಂಘಟನೆಯಾದ ಸಂಯುಕ್ತ್ ಕಿಸಾನ್ ಮೋರ್ಚಾ ಮಂಗಳವಾರ ತಡರಾತ್ರಿ ಕಿಸಾನ್ ಗಣರಾಜ್ಯೋತ್ಸವದ ಮೆರವಣಿಗೆಯನ್ನು ನಿಲ್ಲಿಸಿ, ಭಾಗವಹಿಸಿದ ಎಲ್ಲರಿಗೂ ತಕ್ಷಣವೇ ತಮ್ಮ ಪ್ರತಿಭಟನಾ ಸ್ಥಳಗಳಿಗೆ ಮರಳುವಂತೆ ಮನವಿ ಮಾಡಿದರು. ಚಳುವಳಿ ಶಾಂತಿಯುತವಾಗಿ ಮುಂದುವರಿಯುತ್ತದೆ ಮತ್ತು ಮುಂದಿನ ಕ್ರಮಗಳನ್ನು ಚರ್ಚಿಸಿ ಶೀಘ್ರದಲ್ಲೇ ತೀರ್ಮಾನಿಸಲಾಗುವುದು, ಎಂದು ಎಸ್ಕೆಎಂ ಘೋಷಿಸಿದೆ.