ಭೂಸೇನಾ ಪಡೆಯ ಮೇಲೆ ಗ್ರೆನೇಡ್ ದಾಳಿ, 3 ಯೋಧರಿಗೆ ಗಾಯ : ಆಸ್ಪತ್ರೆಗೆ ದಾಖಲು | Janata news
ನವದೆಹಲಿ : ರಸ್ತೆ ತೆರವು ಗೊಳಿಸುವ ಭೂಸೇನಾ ಸಿಬ್ಬಂದಿಗಳ ತಂಡದ ಮೇಲೆ ಭಯೋತ್ಪಾದಕರು ಗ್ರೆನೇಡ್ ಸ್ಫೋಟಿಸಿದ ಪರಿಣಾಮ ಮೂವರು ಯೋಧರಿಗೆ ಗಾಯಗಳಾಗಿವೆ, ಎಂದು ಸೇನಾ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಖನಬಲ್ ನ ಶಮ್ಶೀಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶುದ್ಧೀಕರಣ ಡ್ರಿಲ್ ಕಾರ್ಯಚರಣೆಯಲ್ಲಿದ್ದ ರಸ್ತೆ ತೆರವು ಗೊಳಿಸುವ ತಂಡದ ಮೇಲೆ ಭಯೋತ್ಪಾದಕರು ಗ್ರೆನೇಡ್ ಸ್ಫೋಟಿಸಿದ್ದಾರೆ, ಎಂದು ಸೇನಾ ಅಧಿಕಾರಿಗಳು ಮಾಹಿತಿಯ ನೀಡಿದ್ದಾರೆ.
ಇಂದು ಜನವರಿ 27ರಂದು ಬೆಳಿಗ್ಗೆ 10:15 ರ ವೇಳೆಗೆ ಸ್ಯಾನಿಟೈಸೇಷನ್ ಡ್ರಿಲ್ ನಡೆಸುತ್ತಿದ್ದಾಗ ಗ್ರೆನೇಡ್ ದಾಳಿ ನಡೆದಿದೆ. ಗಾಯಾಳು ಯೋಧರುಗಳನ್ನು ಸ್ಥಳೀಯ 92 ಬೇಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಗಣರಾಜ್ಯೋತ್ಸವದಂದು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ದಲ್ಲಿ ಎಲ್ಲೆಡೆ ತ್ರಿವರ್ಣ ಧ್ವಜದ ಹಾರಾಟ ಹಾಗೂ ಆಚರಣೆ ನಡೆದ ಬೆನ್ನಲ್ಲೇ ಭಯೋತ್ಪಾದಕರು ಶಾಂತಿಭಂಗಕ್ಕೆ ಪ್ರಯತ್ನಿಸಿದ್ದಾರೆ.