ಹೃದಯ ವಿದ್ರಾವಕ ಘಟನೆ: ಮಗಳು, ಮಗ ಮತ್ತು ತಾಯಿ ಮೂವರು ಆತ್ಮಹತ್ಯೆ | Janata news
ದಾವಣಗೆರೆ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರಾಜಪ್ಪ ವರ ಪತ್ನಿ ಕಮಲಮ್ಮ ಮತ್ತು ಇವರ ಮಗಳು ಶ್ರುತಿ(24), ಮಗ ಸಂಜಯ್(21) ಮೃತ ದುರ್ದೈವಿಗಳು.
ಈ ಮೂವರೂ ಸಂತೆಬೆನ್ನೂರು ವ್ಯಾಪ್ತಿಯ ಸೂಳೆಕೆರೆ ಚಾನಲ್ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಶ್ರುತಿ ಎಂಎ ಪದವೀಧರೆ. ಸಂಜಯ್ ಇಂಜಿನಿಯರಿಂಗ್ ಪದವೀಧರ. ಇವರ ತಂದೆ ರಾಜಪ್ಪ ನಿವೃತ್ತ ಉಪನ್ಯಾಸಕರಾಗಿದ್ದರು. ಕೆಲ ದಿಗಳ ಹಿಂದೆಯೇ ರಾಜಪ್ಪ ನಿಧನ ಹೊಂದಿದ್ದರು.
ಶೃತಿ ಮದುವೆ ವಿಚಾರಕ್ಕೆ ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಆಗಿದ್ದರಿಂದ ಆತ್ಮಹತ್ಯೆಗೆ ಮದುವೆ ವಿಚಾರವೇ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.