ಉತ್ತರಾಖಂಡ : ಹಿಮಗಡ್ಡೆ ಒಡೆದು ಪ್ರವಾಹ, 100ಕ್ಕೂ ಅಧಿಕ ಸಾವಿನ ಆತಂಕ | Janata news
ಡೆಹ್ರಾಡೂನ್ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಹಿಮಗಡ್ಡೆ ಒಡೆದು ಬಿದ್ದ ನಂತರ 100 ರಿಂದ 150 ಜನರು ಸಾವನ್ನಪ್ಪಿರುವ ಆತಂಕ ವ್ಯಕ್ತವಾಗಿದೆ. ಭಾನುವಾರ ಬೆಳಿಗ್ಗೆ ಉತ್ತರಾಖಂಡ ಅಲಕಾನಂದ ಮತ್ತು ಧೌಲಿಗಂಗಾ ನದಿಗಳಲ್ಲಿ ಹಿಮಪಾತ ಮತ್ತು ಭಾರಿ ಪ್ರವಾಹ ಉಂಟಾಗಿದೆ.
ಪ್ರಕೃತಿ ವಿಕೋಪದಿಂದ ಹತ್ತಿರದ ರಿಷಿಗಂಗಾ ಮತ್ತು ಎನ್ಟಿಪಿಸಿ ವಿದ್ಯುತ್ ಸ್ಥಾವರಗಳಿಗೆ ಹಾನಿ ಉಂಟಾಗಿದೆ ಹಾಗು ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ವಿಪತ್ತು ನಿರ್ವಹಣ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಮತ್ತು ಸೈನ್ಯವು ನಾಲ್ಕು ತುಕಡಿಗಳನ್ನು ನಿಯೋಜಿಸಿದ್ದು, ಮೂರು ಹೆಲಿಕಾಪ್ಟರ್ಗಳು ವೈಮಾನಿಕ ಸಮೀಕ್ಷೆ ನಡೆಸುತ್ತಿವೆ.
ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಅಸ್ಸಾಂನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಉತ್ತರಾಖಂಡದ ದುರದೃಷ್ಟಕರ ಪರಿಸ್ಥಿತಿಯ ಮೇಲ್ವಿಚಾರಣೆ ನಿರಂತರವಾಗಿ ಮಾಡುತ್ತಿದ್ದೇನೆ. ಭಾರತವು ಉತ್ತರಾಖಂಡದೊಂದಿಗೆ ನಿಂತಿದೆ ಮತ್ತು ಅಲ್ಲಿ ಪ್ರತಿಯೊಬ್ಬರ ಸುರಕ್ಷತೆಗಾಗಿ ರಾಷ್ಟ್ರವು ಪ್ರಾರ್ಥಿಸುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೇನೆ ಮತ್ತು ಎನ್ಡಿಆರ್ಎಫ್ ನಿಯೋಜನೆ, ಸಂರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತು ಕ್ಷಣಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದೇನೆ, ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಉತ್ತರಾಖಂಡದ ಚಮೋಲಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ವಿವರ ಪಡೆದಿದ್ದಾರೆ. ಉತ್ತರಾಖಂಡ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಕೇಂದ್ರದ ಗೃಹ ಖಾತೆ ರಾಜ್ಯಮಂತ್ರಿ ನಿತ್ಯಾನಂದ್ ರೈ ಅವರೊಂದಿಗೆ ಪರಿಹಾರ ಮತ್ತು ಸಂರಕ್ಷಣಾ ನೇತ್ರತ್ವ ವಹಿಸಿದ್ದಾರೆ. ವಾಯುಪಡೆ ಮತ್ತು ಇತರ ವಿಪತ್ತು ಪರಿಹಾರ ಪಡೆಗಳನ್ನು ಕಾಯ್ದಿರಿಸಲಾಗಿದೆ.