ಟ್ವೀಟ್ ಮಾಡಿದ್ದಕ್ಕೆ ಭಾರತ ರತ್ನ ಸಚಿನ್, ಲತಾ ವಿರುದ್ಧ ತನಿಖೆ : ಠಾಕ್ರೆ ಸರ್ಕಾರದ ವಿರುದ್ಧ ಜನಾಕ್ರೋಶ | Janata news
ಮುಂಬೈ : ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತದ ಹೆಸರಿಗೆ ಕಳಂಕ ತರುವಂತಹ ವಿದೇಶಿಗರ ಷಡ್ಯಂತ್ರ ಬೆಳಕಿಗೆ ಬಂದ ಬೆನ್ನಲ್ಲೇ, ಕಳೆದ ವಾರ, ಭಾರತರತ್ನಗಳಾದ ಸಚಿನ್ ತೆಂಡೂಲ್ಕರ್ ಹಾಗೂ ಲತಾ ಮಂಗೇಶ್ಕರ್ ಸೇರಿದಂತೆ ಇತರ ರಾಷ್ಟ್ರೀಯ ಖ್ಯಾತನಾಮರು ದೇಶಒಗ್ಗಟ್ಟು ಪ್ರದರ್ಶಿಸುವಂತೆ ಟ್ವೀಟ್ ಮಾಡಿದ್ದು, ಇದಕ್ಕಾಗಿ ರಾಜ್ಯದ ಠಾಕ್ರೆ ಸರ್ಕಾರ ತನಿಖೆಗೆ ಮುಂದಾಗಿದೆ. ಕರ್ನಾಟಕ ಗಡಿ ಕುರಿತು ವಿವಾದ ಎಬ್ಬಿಸಿದ ಬೆನ್ನಲ್ಲೇ ಉದ್ಭವ್ ಠಾಕ್ರೆ ಸರ್ಕಾರ ಮತ್ತೊಂದು ವಿವಾದಕ್ಕೆ ಮುಂದಾಗಿದೆ.
ಖ್ಯಾತನಾಮರ ಟ್ವೀಟ್ ನಿಂದ ಕೆರಳಿದಂತೆ ಕಂಡುಬಂದ ಮಹಾರಾಷ್ಟ್ರದ ಉದ್ಭವ್ ಠಾಕ್ರೆ ಸರ್ಕಾರವು, ಈ ಟ್ವೀಟ್ ಗಳ ತನಿಖೆ ನಡೆಸಲು ಮುಂದಾಗಿದೆ. ಮಹಾ ಆಘಾಡಿ ಸರ್ಕಾರದ ಈ ನಡೆ ದೇಶಾದ್ಯಂತ ಭಾರಿ ಟೀಕೆಗೆ ಒಳಗಾಗಿದ್ದು, ದೇಶದ ಒಗ್ಗಟ್ಟಿನ ಪರ ಟ್ವೀಟ್ ಮಾಡುವುದು ಅಪರಾಧ ಎಂಬಂತೆ ಭಾಸವಾಗಿದೆ ಎಂದು ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ, ಗೃಹ ಸಚಿವ ಅನಿಲ್ ದೇಶ್ಮುಖ್ ಅವರು, ಟ್ವೀಟ್ಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರದ ತಮ್ಮ ರಾಜ್ಯ ಸರ್ಕಾರ ಆದೇಶಿಸಲಿದೆ, ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಕಾಶ ಜಾವಡೆಕರ್ ಅವರು ಠಾಕ್ರೆ ಸರ್ಕಾರವನ್ನು ತೀವ್ರವಾಗಿ ಟಿಕಿಸಿದ್ದು, ಮಹಾರಾಷ್ಟ್ರದಲ್ಲಿ ಈಗ ದೇಶಭಕ್ತಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಮುಂತಾದವರು ಭಾರತದ ಪರವಾಗಿ ನೀಡಿದ ಹೇಳಿಕೆಗಳಿಂದಾಗಿ, ಮಹಾರಾಷ್ಟ್ರ ಸರ್ಕಾರ ಈ ಎಲ್ಲದರ ಬಗ್ಗೆ ತನಿಖೆ ನಡೆಸಲಿದೆ! ಇದು ಎಫ್ಡಿಐ-ವಿದೇಶಿ ವಿನಾಶಕಾರಿ ಐಡಿಯಾಲಜಿಯ ಪರಿಣಾಮವಾಗಿದೆ, ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದ ಎಂವಿಎ(ಮಹಾ ವಿಕಾಸ್ ಅಘಾಡಿ) ಆಡಳಿತ ವಿಶಿಷ್ಟ ಮಾದರಿಯನ್ನು ಹೊಂದಿದೆ - ಭಾರತವನ್ನು ಕಳಪೆ ಬೆಳಕಿನಲ್ಲಿ ತೋರಿಸುವ ವಿದೇಶಗಳಿಂದ ಬಂದ ಅರಾಜಕತೆಯ ಶಬ್ದಗಳನ್ನು ಪ್ರಶಂಸಿವುದು, ಆದರೆ ರಾಷ್ಟ್ರಕ್ಕಾಗಿ ನಿಲ್ಲುವ ದೇಶಭಕ್ತ ಭಾರತೀಯರಿಗೆ ಕಿರುಕುಳ ನೀಡುವುದು. ಅವರ ಆದ್ಯತೆಗಳು ಅಥವಾ ಅವರ ಮನಸ್ಥಿತಿ : ಯಾವುದು ಹೆಚ್ಚು ದೋಷಪೂರಿತವಾದುದನ್ನು ನಿರ್ಧರಿಸಲು ಕಷ್ಟ? , ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಇನ್ನೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಈ ಕುರಿತು ಹೇಳಿದ್ದು, ಅಸಹ್ಯಕರ ಮತ್ತು ಹೆಚ್ಚು ಶೋಚನೀಯ! ನಿಮ್ಮ ಮರಾಠಿ ಹೆಮ್ಮೆ ಈಗ ಎಲ್ಲಿದೆ? ನಿಮ್ಮ ಮಹಾರಾಷ್ಟ್ರ ಧರ್ಮ ಎಲ್ಲಿದೆ? ನಮ್ಮ ರಾಷ್ಟ್ರಕ್ಕಾಗಿ ಒಂದೇ ಧ್ವನಿಯಲ್ಲಿ ಸದಾ ಸದೃಡವಾಗಿ ನಿಲ್ಲುವ ಭಾರತ್ ರತ್ನರ ವಿರುದ್ಧ ತನಿಖೆ ನಡೆಸಲು ಆದೇಶಿಸುವ ಇಂತಹ, ರತ್ನಗಳು, (ರತ್ನಗಳು) ಇಡೀ ರಾಷ್ಟ್ರದಲ್ಲಿ ನಮಗೆ ಸಿಗುವುದಿಲ್ಲ. ಈ ಎಂವಿಎ(ಮಹಾ ವಿಕಾಸ್ ಅಘಾಡಿ) ಸರ್ಕಾರವು ಎಲ್ಲಾ ಇಂದ್ರಿಯಗಳನ್ನು ಕಳೆದುಕೊಂಡಿದೆಯೇ? ಭಾರತ್ ರತ್ನಗಳಿಗೆ, ತನಿಖೆ, ಎಂಬ ಪದವನ್ನು ಬಳಸುವಾಗ ಎಂವಿಎಗೆ ನಾಚಿಕೆಯಾಗಬೇಕು! ವಾಸ್ತವವಾಗಿ, ಈಗ ಅಂತಹ ಬೇಡಿಕೆಯನ್ನು ಮಾಡಿದವರ ಮತ್ತು ನಮ್ಮ ಭಾರತ್ ರತ್ನಗಳ ವಿರುದ್ಧ ತನಿಖೆ ನಡೆಸಲು ಆದೇಶಿಸಿದ ಜನರ ಮಾನಸಿಕ ಸ್ಥಿತಿ ಮತ್ತು ಸ್ಥಿರತೆಯನ್ನು ತನಿಖೆ ಮಾಡುವುದು ಅಗತ್ಯವೆಂದು ತೋರುತ್ತದೆ, ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.