ಆನೆದಂತ ಸಾಗಣೆ: ನಾಲ್ವರು ಆರೋಪಿಗಳ ಬಂಧನ | Janata news
ಚಾಮರಾಜನಗರ : ಆನೆ ದಂತದ ಸಂಗ್ರಹ ಹಾಗೂ ಕಳ್ಳಸಾಗಾಣಿಕೆ ಆರೋಪದ ಹಿನ್ನೆಲೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಶಿವಶಂಕರ್, ಸುರೇಶ್, ಗುಂಡ್ಲುಪೇಟೆ ತಾಲೂಕಿನ ಅನಿಲ್, ರಘು ಬಂಧಿತ ಆರೋಪಿಗಳು. ಇವರನ್ನು ಬಂಧಿಸಿ 2 ಕೆಜಿ ಆನೆದಂತವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಚೀಲವೊಂದರಲ್ಲಿ ಎರಡು ಆನೆ ದಂತಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಂತರ್ಜಾಲ, ಆರ್ಥಿಕ, ಮಾದಕ ವಸ್ತುಗಳ ಅಪರಾಧ (ಸೆನ್) ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದರು. ಇವರನ್ನು ಬಂಧಿಸಿ ಪರಿಶೀಲಿಸಿದಾಗ ಚೀಲದಲ್ಲಿ ಆನೆ ದಂತಗಳು ದೊರೆತವು.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸ್ವಾಮಿ, ಜಗದೀಶ್, ರಾಮು, ಮಲ್ಲಿಕ್, ಶಶಿಧರಮೂರ್ತಿ, ಮಂಜುನಾಥ್, ಪ್ರಸಾದ್, ನವೀನ್, ಸಿದ್ದರಾಜೇಗೌಡ ಪಾಲ್ಗೊಂಡಿದ್ದರು.