ವಿಜಯಪುರದಲ್ಲಿ ಸಾಲಬಾಧೆಗೆ ಯುವ ರೈತ ಆತ್ಮಹತ್ಯೆ | Janata news
ವಿಜಯಪುರ : ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.
ಆಲಮೇಲ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿನ ಮರಕ್ಕೆ ಪುಂಡಲಿಂಗ ಜೀರಟಗಿ (22) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿದ್ದ ಬೆಳೆ ಹಾಳಾಗಿದ್ದು, ಜಮೀನಿನ ಲೀಸ್ ಹಣ ಕೊಡಲಾಗದೆ ಹಾಗೂ ಖಾಸಗಿಯಾಗಿ ಮಾಡಿದ ಸಾಲ ಮರು ಪಾವತಿ ಮಾಡಲಾರದೆ ನೇಣಿಗೆ ಪುಂಡಲಿಂಗ ಶರಣಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ಅಲಮೇಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
RELATED TOPICS:
English summary :Vijaypura