ಕಾಲುವೆಗೆ ಬಿದ್ದ ಇಬ್ಬರು ಬಾಲಕರು: ಓರ್ವ ಸಾವು, ಮತ್ತೊಬ್ಬ ನಾಪತ್ತೆ | Janata news
ರಾಯಚೂರು : ರಾಯಚೂರು ತಾಲೂಕಿನ ರಾಮರಾವ್ ಕ್ಯಾಂಪ್ನ ಬಳಿ ಇಬ್ಬರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ. ಈ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ.
ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಪ್ರವೀಣ (10) ಶವವಾಗಿ ಪತ್ತೆಯಾದರೆ, ಚಿನ್ನು (10) ನಾಪತ್ತೆಯಾಗಿದ್ದಾನೆ. ಈತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಫೆ.12 ರಂದು ಇಬ್ಬರು ಮಕ್ಕಳು ತೆರಳಿದ್ದು, ಮಧ್ಯಾಹ್ನದ ವೇಳೆ ಶಾಲೆಯಲ್ಲಿ ಬಿಟ್ಟು ಹೊರಗಡೆ ಹೋಗಿದ್ದಾರೆ. ಸಂಜೆಯಾದರೂ ಇಬ್ಬರು ಮನೆಗೆ ಮರಳಲಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು, ಸಂಬಂಧಿಕರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ.
ಇಂದು ಬೆಳಗ್ಗೆ ಪ್ರವೀಣ್ ಮೃತ ದೇಹ ಕಾಲುವೆಯಲ್ಲಿ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕನ ಸಹ ಕಾಲುವೆಯಲ್ಲಿ ಹೋಗಿರಬಹುದೆಂದು ಅಗ್ನಿ ಶಾಮಕ ಸಿಬ್ಬಂದಿ ನೆರವಿನೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇಡಪನೂರು ಠಾಣೆಯಲ್ಲಿ ಪ್ರಕರಣ ಕಾಣೆ ಪ್ರಕರಣ ದಾಖಲಾಗಿದೆ.