ಡಿಸಿ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದ ಖತರ್ನಾಕ್ ಲೇಡಿ ಅರೆಸ್ಟ್! | Janata news
ತುಮಕೂರು : ಡಿಸಿ, ಎಡಿಸಿ, ಎಸಿ ಬಳಿ ಪರ್ಸನಲ್ ಸೆಕ್ರೆಟರಿ ಕೆಲಸ ಕೊಡಿಸುತ್ತೇನೆಂದು ನಾಲ್ವರಿಗೆ ಪಂಗನಾಮ ಹಾಕಿದ್ದ ವಂಚಕಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೌಮ್ಯ ಅಲಿಯಾಸ್ ಲಾವಣ್ಯಗೌಡ (33) ಬಂಧಿತ ವಂಚಕಿ. ಬೆಂಗಳೂರಿನ ಕಡಬಗೆರೆ ಬಳಿಯ ಜನಪ್ರಿಯ ಲೇಔಟ್ ನಿವಾಸಿ ಲಾವಣ್ಯಗೌಡ, ನಿರುದ್ಯೋಗಿ ಯುವಕರಿಗೆ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದಳು.
ರಶ್ಮಿ, ರಾಜೇಶ್, ತಿಮ್ಮರಾಜು ಹಾಗೂ ಸಂದೀಪ್ ಕುಮಾರ್ಗೆ ಉದ್ಯೋಗ ಕೊಡಿಸುವುದಾಗಿ ಲಾವಣ್ಯ ಗೌಡ, ಗೂಗಲ್ ಪೇ, ಫೋನ್ ಪೇ ಮೂಲಕ 4.5 ಲಕ್ಷ ರೂ., ಹಣ ಹಾಗೂ ಮೂಲ ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದಳು.
ಹಣ ಕಳೆದುಕೊಂಡ ರಾಜೇಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಲಾವಣ್ಯಗೌಡಳನ್ನು ಬಂಧಿಸಿದ್ದಾರೆ.