ದಿಶಾ ರವಿ ಬಂಧನ : ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕರು ಸೇರಿದಂತೆ ಪಾಕಿಸ್ತಾನದ ವಾಗ್ದಾಳಿ | Janata news
ನವದೆಹಲಿ : ಜಾಗತಿಕ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ನ ಹೊರಹಾಕಿದ್ದ, ಟೂಲ್ಕಿಟ್, ಷಡ್ಯಂತ್ರದ ಪ್ರಕರಣದ ತನಿಖೆಗಾಗಿ ಬೆಂಗಳೂರು ಮೂಲದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಪ್ರಮುಖ ವಿರೋಧ ಪಕ್ಷಗಳೂ ಸೇರಿದಂತೆ ಶತ್ರುರಾಷ್ಟ್ರ ಪಾಕಿಸ್ತಾನ ಕೂಡ ವಾಗ್ದಾಳಿ ಪ್ರಾರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನದ ಪಿಟಿಐ, ಮೋದಿ/ಆರ್ಎಸ್ಎಸ್ ಆಡಳಿತದಲ್ಲಿರುವ ಭಾರತವು ಐಐಒಜೆಕೆ ಯಲ್ಲಿ ಮಾಡಿದಂತೆ ಅವರ ವಿರುದ್ಧ ಎಲ್ಲಾ ಧ್ವನಿಗಳನ್ನು ಮೌನಗೊಳಿಸುವ ನಂಬಿಕೆ ಹೊಂದಿದೆ. ಕ್ರಿಕೆಟಿಗರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳ ನಿರೂಪಣಾ ಸೃಷ್ಟಿಗೆ ಬಳಸುವುದು ಸಾಕಷ್ಟು ನಾಚಿಕೆಗೇಡಿನ ಸಂಗತಿಯಾಗಿದೆ, ಆದರೆ ಈಗ ಅವರು ಟ್ವಿಟರ್ ಟೂಲ್ಕಿಟ್ ಪ್ರಕರಣದ ಬಗ್ಗೆ ದಿಶಾ ರವಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ಎಂದು ಅಕ್ರೋಶ ಹೊರಹಾಕಿದೆ.
ಸೋಮವಾರ ಬೆಳಿಗ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, 21 ವರ್ಷದ ದಿಶಾ ರವಿ ಅವರ ಬಂಧನವು ಪ್ರಜಾಪ್ರಭುತ್ವದ ಮೇಲಿನ ಅಭೂತಪೂರ್ವ ದಾಳಿಯಾಗಿದೆ, ಎಂದು ಹೇಳಿಕೊಳ್ಳಲು ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಇನ್ನೂ, ಕಾಂಗ್ರೆಸ್ ಮುಖಂಡ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ದಿಶಾ ರವಿ ಬಂಧನದ ಕುರಿತಾದ ವರದಿಗಳನ್ನು ಹಂಚಿಕೊಂಡು, ಹೇಳು, ನಿಮ್ಮ ತುಟಿಗಳು ಮಾತನಾಡಲು ಮುಕ್ತವಾಗಿವೆ. ಹೇಳು, ಸತ್ಯ ಇನ್ನೂ ಜೀವಂತವಾಗಿದೆ! ಅವರು ಭಯಭೀತರಾಗಿದ್ದಾರೆ, ದೇಶವಲ್ಲ!, ಎಂದು ಸಾಂಕೇತಿಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಪ್ರಿಯಂಕಾ ಗಾಂಧಿ ವಾಡ್ರಾ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಬಂದೂಕುದಾರಿಗಳು ನಿರಾಯುಧ ಹುಡುಗಿಗೆ ಹೆದರುತ್ತಿದ್ದರು. ನಿರಾಯುಧ ಹುಡುಗಿಯಿಂದ ಧೈರ್ಯದ ಬೆಳಕು ಚೆಲ್ಲಿದೆ, ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ರಾಜ್ಯದ ನಾಯಕರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ. ದಿಶಾ ರವಿ ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ: ನಾರಿ ಮುನಿದರೆ ಮಾರಿ, ಎಂದು ಎಚ್ಚರಿಕೆ ನೀಡಿದ್ದಾರೆ.
Arrest of 21 yr old Disha Ravi is an unprecedented attack on Democracy. Supporting our farmers is not a crime.
— Arvind Kejriwal (@ArvindKejriwal) February 15, 2021
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ @narendramodi,
— Siddaramaiah (@siddaramaiah) February 15, 2021
ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ.#DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ,
ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು.
ನೆನಪಿರಲಿ:
ನಾರಿ ಮುನಿದರೆ ಮಾರಿ.#DishaRaviArrested pic.twitter.com/qNsLwuPM0W