ಕೆಂಪು ಕೋಟೆ ಹಿಂಸಾಚಾರ : ದೀಪ್ ಸಿಧು ಪೋಲಿಸ್ ಕಸ್ಟಡಿಯ ಅವಧಿ 7 ದಿನ ವಿಸ್ತರಣೆ | Janata news
ನವದೆಹಲಿ : ಗಣರಾಜ್ಯೋತ್ಸವ ದಿನದಂದು ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪಂಜಾಬಿ ನಟ ದೀಪ್ ಸಿಧು ಪೋಲಿಸ್ ಕಸ್ಟಡಿಯ ಅವಧಿಯನ್ನು ಇನ್ನೂ ಏಳು ದಿನಗಳವರೆಗೆ ವಿಸ್ತರಿಸಲಾಗಿದೆ.
ರೈತ ಪ್ರತಿಭಟನೆ ಸೋಗಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಟ ದೀಪ್ ಸಿಧು ವೀಡಿಯೊ ಹಂಚಿಕೊಂಡಿದ್ದನು. ಈ ಕುರಿತು ತನಿಖೆ ಆರಂಭಿಸಿದ ದೆಹಲಿ ಪೊಲೀಸರು ಆತನ ಬಂಧನಕ್ಕೆ ವ್ಯಾಪಕ ಶೋಧ ನಡೆಸಿದ್ದಲ್ಲದೆ, ಅವನ ಬಗ್ಗೆ ಸುಳೀವು ನೀಡಿದವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದ್ದರು. ಬಳಿಕ ಹರಿಯಾಣದ ಜಿಕರ್ಪುರ್ ನಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದನು.
ದೆಹಲಿ ನ್ಯಾಯಾಲಯವು ದೀಪ್ ಸಿಧು ಪೋಲಿಸ್ ಕಸ್ಟಡಿಯ ಅವಧಿಯನ್ನು ಹೆಚ್ಚುವರಿ ಏಳು ದಿನಗಳ ಕಾಲ ವಿಸ್ತರಿಸಿದೆ.