ಪ್ರೇಮ ವಿವಾಹ: ಬರ್ತ್ ಡೇಗೆ ವಿಶ್ ಮಾಡೋ ನೆಪದಲ್ಲಿ ಬರ್ಬರ ಹತ್ಯೆ ಮಾಡಿದ ಅಣ್ಣ-ಚಿಕ್ಕಪ್ಪ! | Janata news
ಬೆಂಗಳೂರು : ತಮ್ಮ ಇಚ್ಚೆ ಹೊರಾತಾಗಿಯೂ ಪ್ರೀತಿಸಿದ ಯುವಕನನ್ನೇ ಮದುವೆಯಾದ ಸಿಟ್ಟಿಗೆ ಯುವಕನನ್ನು ಯುವತಿಯ ಚಿಕ್ಕಪ್ಪ ಮತ್ತು ಆಕೆಯ ಸಹೋದರ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಚೇತನ್ (27) ಕೊಲೆಯಾದ ಯುವಕ. ಚೇತನ್ ಮತ್ತು ಭೂಮಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ಆಕೆಯ ಮದುವೆಯನ್ನು ಬಲವಂತವಾಗಿ ಬೇರೆಯ ಹುಡುಗ ವಿಜಯ್ ಜೊತೆ ಅದ್ದೂರಿಯಾಗಿ ಮಾಡಲಾಗಿತ್ತು. ಮದುವೆಯಾದರೂ ಭೂಮಿಕಾ, ಚೇತನ್ ನನ್ನ ಪ್ರೀತಿಸುತ್ತಿದ್ದಳು. ಇದೇ ಕಾರಣಕ್ಕೆ ಮದುವೆಯಾದ ಒಂದು ವಾರಕ್ಕೆ ವಿಜಯ್ನನ್ನು ಬಿಟ್ಟು ಚೇತನ್ ಜೊತೆ ಬಂದಿದ್ದಳು.
ಭೂಮಿಕಾ ಹಾಗು ಚೇತನ್ ಮನೆಯವ ವಿರೋಧದ ನಡುವೆಯೂ ಎರಡು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಪ್ರೀತಿಸಿ ಮದ್ವೆ ಆಗಿದ್ದ ಇವರಿಬ್ಬರೂ ಲಗ್ಗೆರಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಬರ್ತ್ ಡೇಗೆ ವಿಶ್ ಮಾಡೋ ನೆಪದಲ್ಲಿ ಮನೆಗೆ ಮಂಗಳವಾರ ಚೇತನ್ ಮನೆಗೆ ಭೂಮಿಕಾಳ ತಮ್ಮ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಬಂದಿದ್ದರು. ಚೇತನ್ ಕುತ್ತಿಗೆಯನ್ನ ಚಾಕುವಿನಿಂದ ಕೊಯ್ದು ಹತ್ಯೆ ಮಾಡಿದ್ದಾರೆ.
ಈ ಕುರಿತು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.