ಪತಿ ನಿಷ್ಕಾಳಜಿ, ಮನನೊಂದು ಪತ್ನಿ ನೇಣಿಗೆ ಶರಣು | Janata news
ಬಾಗಲಕೋಟೆ : ಪತಿ ಖುಷಿ ಅನ್ನೊದೆ ಕೊಡಲೇ ಇಲ್ಲ, ಯಾವಾಗಲೂ ಕಾಯೋದೇ ಆಯ್ತು ಎಂದು ಪತಿಯ ನಿಷ್ಕಾಳಜಿ ಬಗ್ಗೆ ಡೆತ್ ನೋಟ್ ಬರೆದಿಟ್ಟು ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯ ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ.
ವೀಣಾ ಶರಣಬಸವ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಪತಿ ಶರಣಬಸವ ನನ್ನ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ, ಬರಿ ಅವನಿಗೆ ಅವನದ್ದೇ ಚಿಂತೆ, ನನ್ನ ಬಗ್ಗೆ ಪ್ರೀತಿ ಕಾಳಜಿ ಅನ್ನೋದೇ ಇಲ್ಲ.
ನನ್ನನ್ನು ಸಂತೋಷದಿಂದ ನೋಡಿಕೊಂಡಿಲ್ಲ. ನಮ್ಮ ಮಗುವನ್ನು ಸರಿಯಾಗಿ ನೋಡಿಕೊಳ್ಳಿ. ನನ್ನ ಸಾವಿಗೆ ನಾನೇ ಕಾರಣ, ಪೊಲೀಸರಿಗೆ ದೂರು ಸಹ ನೀಡಬೇಡಿ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.
ಸಿಂಧನೂರು ನಗರ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
RELATED TOPICS:
English summary :Bagalkote