ಕಾಂಗ್ರೆಸ್ ಎಂದೂ ಜನರಿಗಾಗಿ ಕೆಲಸ ಮಾಡುವುದಿಲ್ಲ, ಕೆಲಸ ಮಾಡುವವರಿಗೂ ಬಿಡುವುದಿಲ್ಲ - ಪ್ರಧಾನಿ ಮೋದಿ | Janata news
ಪುದುಚೇರಿ : ಡಿಎಂಕೆ-ಕಾಂಗ್ರೆಸ್ ಸಭೆಗಳು ಭ್ರಷ್ಟಾಚಾರದ ಹ್ಯಾಕಥಾನ್ನಂತೆ; ಸಭೆಯಲ್ಲಿ ಅವರ ನಾಯಕರು ಕುಳಿತು ಹೇಗೆ ಲೂಟಿ ಮಾಡಬೇಕೆಂದು ಚರ್ಚಿಸುತ್ತಾರೆ. ಪ್ರತಿಪಕ್ಷಗಳ ರಾಜಕೀಯ ಶೈಲಿಯು ಕಿರುಕುಳ ಮತ್ತು ಬೆದರಿಸುವಿಕೆಯನ್ನು ಆಧರಿಸಿದೆ. ಡಿಎಂಕೆ ಅಧಿಕಾರಕ್ಕೆ ಬಂದಾಗಲೆಲ್ಲಾ ಅವರು ಪ್ರಬಲ ಗಂಡಸಿನ ಸಂಸ್ಕೃತಿಯನ್ನು ಉತ್ತೇಜಿಸುತ್ತಾರೆ. ಅಂತಹ ಸಂಸ್ಕೃತಿಯಲ್ಲಿ ಯಾರು ಹೆಚ್ಚು ಬಳಲುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ? ಅದು ತಮಿಳುನಾಡಿನ ಮಹಿಳೆಯರು. ಡಿಎಂಕೆ ಪಕ್ಷ, ಅಮ್ಮ ಜಯಲಲಿತಾ ಅವರನ್ನು ಹೇಗೆ ನಡೆಸಿಕೊಂಡಿತು ಎಂದು ಇಡೀ ತಮಿಳುನಾಡಿಗೆ ತಿಳಿದಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅವರು ಪುದುಚೇರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಎಂದಿಗೂ ಜನರಿಗಾಗಿ ಕೆಲಸ ಮಾಡುವುದಿಲ್ಲ, ಎಂದು ನನಗೆ ಗೊತ್ತು. ಆದರೆ, ಅವರು ಜನರಿಗಾಗಿ ಕೆಲಸ ಮಾಡುವುವರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಈಗ ತಿಳಿಯುತ್ತಿದೆ, ಎಂದು ಪ್ರಧಾನಿ ಹೇಳಿದ್ದಾರೆ.
ಇದರ ಬಳಿಕ, ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ 1000 ಮೆಗಾವ್ಯಾಟ್ ಸಾಮರ್ಥ್ಯದ ನೈವೇಲಿ ಉಷ್ಣ ವಿದ್ಯುತ್ ಯೋಜನೆಗೆ ರಾಷ್ಟ್ರಕ್ಕೆ ಸಮರ್ಪಿಸಿದರು ಹಾಗೂ ಇತರ ಉಪಕ್ರಮಗಳಿಗೆ ಅಡಿಪಾಯ ಹಾಕಿದ್ದಾರೆ. ಇದೆ ಸಂದರ್ಭದಲ್ಲಿ ತಿರುಪುರ, ಮಧುರೈ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳಲ್ಲಿ 4,144 ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಸಣ್ಣ ಉದ್ಯಮಿಗಳು ಮತ್ತು ಸಣ್ಣ ರೈತರಿಗೆ ಎನ್ಡಿಎ ಹೆಚ್ಚಿನ ಆದ್ಯತೆ ನೀಡಿದೆ. ನಮ್ಮ ರೈತರು ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಬೇಕೆಂದು ನಾವು ಬಯಸುವುದಿಲ್ಲ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪಿಎಂ-ಕಿಸಾನ್ ಯೋಜನೆ ನಿನ್ನೆ ಎರಡು ವರ್ಷ ಪೂರ್ಣಗೊಂಡಿದೆ. 11 ಕೋಟಿ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಹಲವು ವರ್ಷಗಳಿಂದ ಭಾರತದ ರೈತರು ಎಂಎಸ್ಪಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದರು. ಎಂಎಸ್ಪಿ ಯ ಸಮಗ್ರ ಏರಿಕೆ ತರಲು ನಮ್ಮ ಸರ್ಕಾರವೇ ಅವಕಾಶ ತಂದಿದೆ, ಎಂದು ನವದೆಹಲಿಯಲ್ಲಿ ಎಂಎಸ್ಪಿ ಕುರಿತು ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರಿಗೆ ಜ್ನಾಪಿಸಿದ್ದಾರೆ.