ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಸಂಪಿಗೆ ಬಿದ್ದು ಸಾವು | Janata news
ಚಿಕ್ಕಬಳ್ಳಾಪುರ : ಸಂಪಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಪಲ್ಲಿ ಗ್ರಾಮದಲ್ಲಿ ನಡೆದಿದೆ.
ರುಚಿತಾ(2) ಮೃತ ಮಗು. ನೀರಿನ ಸಂಪಿಗೆ ಬಿದ್ದು, 2 ವರ್ಷದ ಹೆಣ್ಣುಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಾಪಲ್ಲಿ ಗ್ರಾಮದ ನರಸಿಂಹ ಮತ್ತು ರಾಧಿಕಾ ದಂಪತಿಯ ಪುತ್ರಿ ರುಚಿತಾ ಮೃತ ಕಂದಮ್ಮ. ಆಟವಾಡುತ್ತಿದ್ದ ವೇಳೆ ರುಚಿತಾ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾಳೆ.
ಇಂದು ಮಗು ನೆರೆಮನೆಯ ನ್ಯಾರಪ್ಪ ಎಂಬವರ ಸಂಪಿನಲ್ಲಿ ಶವವಾಗಿ ಪತ್ತೆಯಾಗಿದೆ. ಮಗುವಿನ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Chikkaballapura