ಸ್ನೇಹಿತನಿಂದ ಮೋಸ: ಫೇಸ್ಬುಕ್ ಲೈವ್ ವೀಡಿಯೋ ಮಾಡಿ ಯುವಕ ನೇಣಿಗೆ ಶರಣು | Janata news
ಬೆಂಗಳೂರು : ಸ್ನೇಹಿತನಿಂದ ಮೋಸಹೋದ ಯುವಕನೋರ್ವ ಫೇಸ್ಬುಕ್ ನಲ್ಲಿ ಲೈವ್ ವೀಡಿಯೋ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊತ್ತನೂರು ನಿವಾಸಿ ಮಂಜುನಾಥ್ ತನ್ನ ಬಳಿಯಿದ್ದ 11 ಲಕ್ಷ ರೂ. ಹಣವನ್ನು ಪವನ್ ಎಂಬುವರಿಗೆ ನೀಡಿದ್ದರು. ವಾಪಸು ನೀಡುವುದಾಗಿ ಪವನ್ ಮತ್ತು ಆತನ ಆಪ್ತರು ಹಣ ಪಡೆದಿದ್ದರು. ಆದರೆ ಆರು ತಿಂಗಳಾದರೂ ಹಣ ವಾಪಸು ನೀಡಿರಲಿಲ್ಲ. ಹಣ ನೀಡುವಂತೆ ಪವನ್ ಗೆ ಕೇಳಿದಾಗ, ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ಬಳಿಕ ಮಂಜುನಾಥ್ ಫೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಮಾಡಿ ತನ್ನ ನೋವು ಹಂಚಿಕೊಂಡಿದ್ದಾರೆ.
ನನ್ನ ಸಾವಿಗೆ ಇವರೇ ಕಾರಣ ರಾಗಿರುತ್ತಾರೆ. ನನ್ನ ಹಣದಲ್ಲಿ ಕಾರು, ಮೊಬೈಲ್ ತಗೊಂಡಿದ್ದಾರೆ. ನನ್ನ ಹಣವನ್ನು ವಾಪಾಸ್ ಕೇಳಿದರೆ ಹುಡುಗರನ್ನು ಕಳುಹಿಸಿ ಜೀವದೆಕರಿಕೆ ಹಾಕುತ್ತಿದ್ದಾರೆ. ಹಣ ನೀಡದೇ ಚಿತ್ರ ಹಿಂಸೆ ನೀಡುತ್ತಿರುವ ಪವನ್ ನನ್ನು ಬಂಧಿಸಿ. ನಾನು ಆತ್ಮಹತ್ಯೆ ಮೊರೆ ಹೋಗುತ್ತಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ.
ಈ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.