ಹಿಂದೂ ಸಂಘಟನೆಗಳ ಮುಖಂಡ ಶಂಕರ ನಾಯ್ಕ ನ್ಯಾಯಾಂಗ ಬಂಧನ
ಕಾರವಾರ : ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಆರೋಪದಡಿ ಬಿಜೆಪಿ ಮತ್ತು ರಾಮಸೇನೆ ಮುಖಂಡ, ಭಟ್ಕಳದ ಚೌಥನಿಯ ನಿವಾಸಿ ಶಂಕರ ನಾಯ್ಕ ಎಂಬುವವರನ್ನು ಇಲ್ಲಿನ ಪೊಲೀಸರು ನಗರದ ಭದ್ರಾ ಹೋಟೆಲ್ ನಲ್ಲಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಗಲಭೆಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಕೆರಳಿಸುವಂಥ ಸಂದೇಶಗಳನ್ನು ಹಾಕಿರುವ ಕುರಿತಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಶಂಕರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಕುರಿತಂತೆ ಗೋಕರ್ಣ ಪಿಎಸ್ಐ ಸಂತೋಷ್ಕುಮಾರ್ ಇಲ್ಲಿನ ನಗರ ಠಾಣೆಯ ಪಿಎಸ್ಐ ನವೀನ್ಕುಮಾರ್ ನಾಯ್ಕ ಹಾಗೂ ಅಂಕೋಲಾ ಪಿಎಸ್ಐ ಶ್ರೀಧರ್ ಅವರುಗಳ ಸಹಾಯದೊಂದಿಗೆ ಶಂಕರ ನಾಯ್ಕಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಅವರನ್ನು ಕುಮಟಾದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.