ದುಬೈನಲ್ಲಿ ಸಾವು: ಏಳು ತಿಂಗಳ ಗರ್ಭಿಣಿ ದುಬೈನಲ್ಲಿ ಕೋವಿಡ್ಗೆ ಬಲಿ | Janata news
ಚಿಕ್ಕಮಗಳೂರು : ಕೋವಿಡ್ಗೆ ತುತ್ತಾಗಿದ್ದ ಚಿಕ್ಕಮಗಳೂರು ಮೂಲದ ಯುವತಿ ದುಬೈನಲ್ಲಿ ಕೋವಿಡ್ಗೆ ಬಲಿಯಾಗಿದ್ದಾಳೆ.
ಪಡುಬಿದ್ರೆಯ ಪವನ್ ಎಂಬವರೊಂದಿಗೆ ಒಂದು ವರ್ಷದ ಹಿಂದಷ್ಟೇ ಶ್ರೇಯಾ ವಿವಾಹ ನಡೆದಿತ್ತು. ಮದುವೆಯ ಬಳಿಕ ಅವರು ಪತಿ ಪವನ್ ಅವರೊಂದಿಗೆ ದುಬೈಗೆ ತೆರಳಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ಶ್ರೇಯಾ ರೈ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ದುಬೈನಲ್ಲಿ ಕೋವಿಡ್ಗೆ ತುತ್ತಾಗಿ ಅನಾರೋಗ್ಯಕ್ಕೀಡಾಗಿದ್ದು, ಗಂಭೀರಾವಸ್ಥೆಯಲ್ಲಿದ್ದರು. ಜತೆಗೆ ನ್ಯೂಮೋನಿಯಾ ಕೂಡ ಆವರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ.
RELATED TOPICS:
English summary :Chikkamagaluru