ಬೆಂಗಳೂರು ಸೇರಿ ದೇಶದ 10 ಕಡೆ ಎನ್ಐಎ ದಾಳಿ! | Janata news
ನವದೆಹಲಿ: : ಐಸಿಸ್ ಸಂಬಂಧಿತ ಕೇಸುಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಸೇರಿ ದೇಶದ ಹತ್ತು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ಸೋಮವಾರ ದಾಳಿ ನಡೆಸಿದೆ.
ದಿಲ್ಲಿ, ಕರ್ನಾಟಕ ಮತ್ತು ಕೇರಳ ಸೇರಿದಂತೆ ದೇಶದ 10 ಕಡೆ ಸೋಮವಾರ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಎನ್ ಐಎ ತಂಡ ಬೆಂಗಳೂರಿನಲ್ಲಿ ಎರಡು ಕಡೆ ಶೋಧ ಕಾರ್ಯ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕೇರಳದ ಕೊಚ್ಚಿ ಮತ್ತು ಕುನೂರು ಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಐವರ ಬಂಧನ ವಾಗಿದೆ ಎಂಬ ಮಾಹಿತಿ ದೊರೆಕಿದ್ದು, ಭಾರತದಲ್ಲಿ ದಾಳಿ ನಡೆಸಲು ಪಾಕ್ ವ್ಯಕ್ತಿಗಳ ಜೊತೆ ಸಂಪರ್ಕ ಆರೋಪವಿದ್ದು, ಆನ್ ಲೈನ್ ಮೂಲಕವೇ ಅವರಿಗೆ ತರಬೇತಿ ನೀಡಿ ಸ್ಥಳೀಯವಾಗಿ ದಾಳಿ ಸಂಘಟಿಸಲು ಅವರನ್ನು ತಯಾರಿ ಮಾಡಲಾಗಿತ್ತು ಎನ್ನಲಾಗಿದೆ.