ವಂಚನೆ: ಬಹುಮಾನದ ಆಸೆಗೆ 3 ಲಕ್ಷ ಕಳೆದುಕೊಂಡ ಶಿವಮೊಗ್ಗದ ನರ್ಸ್ | Janata news
ಶಿವಮೊಗ್ಗ : ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಮೂರು ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗದ ವನಿತಾ ಎಂಬುವವರು ಮೋಸ ಹೋದವರು. ವನಿತಾ ಅವರ ವಿಳಾಸಕ್ಕೆ ದೆಹಲಿಯ ನಾಪ್ಟಾಲ್ ಆನ್ಲೈನ್ ಶಾಪಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ವನಿತಾ ಅವರಿಗೆ ಬಹುಮಾನ ಬಂದಿದೆ ಎಂದು ಪತ್ರ ಕಳುಹಿಸಲಾಗಿತ್ತು.
ಅದನ್ನು ಕಂಡು ವನಿತಾ ಅ ಪತ್ರದಲ್ಲಿದ್ದ ನಂಬರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಬಹುಮಾನದ ಮೊತ್ತ ನೀಡಬೇಕಾದರೆ ಅದಕ್ಕಾಗಿ ಕೆಲವು ಚಾರ್ಜಸ್ಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ನಂಬಿದ ವನಿತಾ, ಹಂತ ಹಂತವಾಗಿ ಮೂರು ಲಕ್ಷ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ, ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.