ಚಲಿಸುತ್ತಿದ್ದ ಲಾರಿ ಇಂಜಿನ್ಗೆ ಬೆಂಕಿ: ಚಾಲಕ ಸಜೀವ ದಹನ | Janata news
ಹಾಸನ : ಚಲಿಸುತ್ತಿದ್ದ ಲಾರಿ ಇಂಜಿನ್ಗೆ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾಗಿರುವ ಘಟನೆ ನಗರದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ನಡೆದಿದೆ.
ತಿರುಮಲೈ ನ ಆನ್ಬಳಗನ್ (32) ಮೃತ ಚಾಲಕ. ತಮಿಳುನಾಡು ಮೂಲದ ಲಾರಿ ಚಾಲಕನೇ ಸುಟ್ಟು ಸತ್ತಿದ್ದಾನೆ. ತಾಂತ್ರಿಕ ದೋಷದಿಂದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದು, ಆ ನಂತರ ಲಾರಿಯ ಗಾಜು ಒಡೆದು ಹಾಕಿ ಚಾಲಕನನ್ನು ರಕ್ಷಣೆ ಮಾಡುವುದರೊಳಗೆ ಆತ ಸುಟ್ಟು ಕರಕಲಾಗಿದ್ದಾನೆ.
ಚಾಲಕ ಹೊರ ಬರಲು ಸಾಧ್ಯವಾಗದೇ ಸೀಟ್ ನಲ್ಲಿ ಕುಳಿತ ಭಂಗಿಯಲ್ಲೇ ಸಜೀವ ದಹನವಾಗಿದ್ದಾರೆ.
ಹಾಸನ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
English summary :Hasan