ಸಿಡಿ ಪ್ರಕರಣ: ಶೀಘ್ರದಲ್ಲೇ ಮನೆಹಾಳ್ ಮಾಡಿದ ಮಹಾನಾಯಕ ಯಾರು ಎಂದು ಗೊತ್ತಾಗಲಿದೆ | Janata news
ಮೈಸೂರು : ಮನೆ ಹಾಳು ಮಾಡಿದ ಮಹಾನ್ ನಾಯಕನ ಬಗ್ಗೆ ತಿಳಿದುಕೊಳ್ಳಲು ನನಗೂ ಕುತೂಹಲವಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಸಿಡಿ ಪ್ರಕರಣದಲ್ಲಿ ಮನೆಹಾಳು ಮಾಡಿ, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹಾಳು ಮಾಡಿದ ಮಹಾನ್ ನಾಯಕ ಯಾರು ಎಂಬ ಕುತೂಹಲ ನನಗೂ ಇದೆ. ಎಸ್.ಐ.ಟಿ. ಸಿಡಿ ಪ್ರಕರಣದಲ್ಲಿ ತನಿಖೆಯನ್ನು ಸಂಪೂರ್ಣಗೊಳಿಸಲಿದ್ದು, ಶೀಘ್ರವೇ ಇದರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಾಗಲಿದೆ.
ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಬಗ್ಗೆ ಏಕೆ ಹೆಸರು ಬರುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ಗೆ ಅಳುಕು ಏಕೆ, ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರು ಇದ್ದಾರೆ. ಮಹಾನ್ ನಾಯಕ ಎಂಬುದು ನಾನೇ ಎಂಬ ಅಳುಕು ಏಕೆ ಎಂದರು.
ಶೀಘ್ರದಲ್ಲೇ ಮನೆಹಾಳ್ ಮಾಡಿದ ಮಹಾನಾಯಕ ಯಾರು ಎಂದು ಗೊತ್ತಾಗಲಿದೆ. ಅದನ್ನು ತಿಳಿದುಕೊಳ್ಳುವ ಕುತೂಹಲ ಇಡೀ ರಾಜ್ಯಕ್ಕಿದೆ ಎಂದರು.