ಹುಡುಗರ ಜೊತೆ ಹೆಚ್ಚು ಮಾತನಾಡಬೇಡ ಎಂದಿದಕ್ಕೆ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ! | Janata news
ದೊಡ್ಡಬಳ್ಳಾಪುರ : ಹುಡುಗರ ಜೊತೆ ಹೆಚ್ಚು ಮಾತನಾಡಬೇಡ ಎಂದು ತಾಯಿ ಬೈದಿದ್ದಕ್ಕೆ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ರಾಜೀವ್ ಗಾಂಧಿ ನಗರದ ಸ್ನೇಹ (18) ಮೃತ ದುರ್ದೈವಿ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಗೆಳೆಯರೊಟ್ಟಿಗೆ ಫೋನ್ನಲ್ಲೇ ಮಾತನಾಡುತ್ತ ಹೆಚ್ಚು ಕಾಲ ಕಳೆಯುತ್ತಿದ್ದ ಸ್ನೇಹಾಗೆ ಆಕೆಯ ತಾಯಿ ಬೈದು ಬುದ್ಧಿ ಮಾತು ಹೇಳಿದ್ದರಂತೆ.
ಅಮ್ಮ ಬೈದಿದ್ದಕ್ಕೆ ನೊಂದುಕೊಂಡ ಸ್ನೇಹಾ, ಮಾ.3ರಂದು ಇಲಿಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾ.19 ರಂದು ಮೃತಪಟ್ಟಿದ್ದಾಳೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.