ಕಲಬುರಗಿಯಲ್ಲಿ 13 ಜೆಸಿಬಿಗಳ ಮೂಲಕ ಹೂ ಮಳೆ ಸುರಿಸಿ ಅಪ್ಪುಗೆ ಅದ್ಧೂರಿ ಸ್ವಾಗತ! | Janata news
ಕಲಬುರಗಿ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು ಕಲಬುರಗಿಯ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ಹೂ ಮಳೆ ಸುರಿಸಿ ಅಪ್ಪುಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಜಿ.ಪಂ. ಮಾಜಿ ಸದಸ್ಯ ನಿತಿನ್ ಗುತ್ತೇದಾರ್ ನೇತೃತ್ವದ ವಿಕೆಜಿ ಗ್ರೂಪ್ನ ಯುವಕರ ಈ ತಂಡ, 13 ಜೆಸಿಬಿಗಳ ಮೇಲೆ ನಿಂತು ಪುಷ್ಪ ವೃಷ್ಟಿ ಸುರಿಯಿತು.
ಗುಲಾಬಿ ಹೂಗಳ ಪಕಳೆಗಳಲ್ಲಿ ಮುಳುಗಿದ ಹೋದ ಅಪ್ಪು, ರಸ್ತೆಯ ಇಕ್ಕೆಲಗಳಲ್ಲಿನಿಂತಿದ್ದ ಅಭಿಮಾನಿಗಳಿಗೆ ಕೈ ಮುಗಿದು, ಯುವರತ್ನ ಚಿತ್ರ ವೀಕ್ಷಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಶರಣಬಸವೇಶ್ವರರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಚಿತ್ರ ಯಶಸ್ಸಿಗೆ ಪ್ರಾರ್ಥಿಸಿದರು. ಬಳಿಕ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ದಾಕ್ಷಯಣಿ ಅವ್ವ ಅವರಿಂದ ಆಶೀರ್ವಾದ ಪಡೆದರು.