ಕನಕಪುರದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ! | Janata news
ಕನಕಪುರ : ರಾಮನಗರ ಜಿಲ್ಲೆ ಕನಕಪುರ ಪಟ್ಟಣದಲ್ಲಿಯೇ ಆನೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನೆಗಳು, ಈಗ ನಗರದಲ್ಲಿಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.
ಕನಕಪುರ ಪಟ್ಟಣದ ಕೋಟೆ ಬೀದಿಯಲ್ಲಿನ ಅರ್ಕಾವತಿ ನದಿ ದಡದಲ್ಲೇ 2 ಆನೆಗಳು ಪ್ರತ್ಯಕ್ಷವಾಗಿದ್ದವು. ಕ್ಯಾಮರಾ ಕಣ್ಣಿಗೆ ಸದ್ಯಕ್ಕೆ ಒಂದು ಆನೆ ಮಾತ್ರ ಬಿದ್ದಿದೆ.
ಇಷ್ಟು ದಿನಗಳ ಕಾಲ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡು, ಜಮೀನಿನಲ್ಲಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದವು. ಭಾನುವಾರ ಬೆಳಿಗ್ಗೆ ಕನಕಪುರ ನಗರದಲ್ಲೇ ಕಾಡಾನೆ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ತಂದಿದೆ.
ತಾಲ್ಲೂಕಿನ ಬಿಳಿಕಲ್ ಫಾರೆಸ್ಟ್ನಿಂದ ಈ ಕಾಡಾನೆಗಳು ಹೊರಗಡೆ ಬಂದಿದ್ದು ಎಲ್ಲಿಯೂ ನೀರು ಸಿಗದಿರುವುದರಿಂದ ಅರ್ಕಾವತಿ ನದಿಗೆ ಬಂದಿವೆ. ಈ ವೇಳೆ ಬೆಳಕಾಗಿರುವುದರಿಂದ ಒಂದು ಆನೆ ತಪ್ಪಿಸಿಕೊಂಡು ನದಿಯ ದಡದಲ್ಲಿ ಸೇರಿಕೊಂಡಿದೆ ಎನ್ನಲಾಗಿದೆ.