ಠಾಕ್ರೆ ಸರ್ಕಾರದಿಂದ ವರ್ಗಾವಣೆ, ಪೋಸ್ಟಿಂಗ್ಗಳಲ್ಲಿ ಪ್ರಚಂಡ ಭ್ರಷ್ಟಾಚಾರ : ಕಾಲ್ ಡಾಟಾ ಇಂಟರ್ಸೆಪ್ಟ್ ವರದಿ ಬಿಚ್ಚಿಟ್ಟ ಪಡ್ನವಿಸ್ | Janata news
ಮುಂಬೈ : ಪೊಲೀಸ್ ವರ್ಗಾವಣೆ ಮತ್ತು ಪೋಸ್ಟಿಂಗ್ಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆಡಿಯೊ ಪ್ರತಿಬಂಧಗಳನ್ನು ಒಳಗೊಂಡ ದೋಷಾರೋಪಣೆ ಮಾಡುವ ರಾಜ್ಯ ಗುಪ್ತಚರ ಇಲಾಖೆ ವರದಿಯನ್ನು ದೇವೇಂದ್ರ ಫಡ್ನವೀಸ್ ಬಿಡುಗಡೆ ಮಾಡಿದ್ದಾರೆ.
ತನ್ನ ಸರ್ಕಾರವನ್ನು ಉಳಿಸಲು ಉದ್ಧವ್ ಠಾಕ್ರೆ ಈ ಸಂಪೂರ್ಣ ದಂಧೆಯನ್ನು ಮರೆಮಾಚಿದ್ದಾರೆ ಮತ್ತು ರಕ್ಷಿಸಿದ್ದಾರೆ ಎಂದು ತೋರುತ್ತದೆ, ಎಂದು ಅವರು ಮಂಗಳವಾರ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸರ್ಕಾರವನ್ನು ಉಳಿಸುವ ಉದ್ದೇಶದಿಂದ ತಮ್ಮ ಗಮನಕ್ಕೆ ತಂದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ದಂಧೆಗೆ ಸಂಬಂಧಿಸಿದ ವರದಿಯ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರಲು ನಿರ್ಧರಿಸಿದ್ದಾರೆ, ಎಂದು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಆರೋಪಿಸಿದರು.
ಸಾಮಾನ್ಯ ಆಡಳಿತ ಇಲಾಖೆ(ಜಿಎಡಿ) ಅವರ ಅಧಿಕಾರ ವ್ಯಾಪಿಯಲ್ಲಿದ್ದರೂ, ಮುಖ್ಯಮಂತ್ರಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರದಿಯು ಆಗಸ್ಟ್ 2020ರಿಂದ ಸರ್ಕಾರದ ಬಳಿಯಲ್ಲೇ ಇದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದಿದ್ದಾರೆ.
6.3 ಜಿಬಿ ಕಾಲ್ ಡಾಟಾ ಇಂಟರ್ಸೆಪ್ಟ್ ಅನ್ನು ಒಳಗೊಂಡಿರುವ ವರದಿಯ ಪ್ರತಿ ತನ್ನ ಬಳಿ ಇದೆ, ಎಂದು ಫಡ್ನವೀಸ್ ಹೇಳಿದ್ದಾರೆ, ಇದನ್ನು ಅವರು ಕೇಂದ್ರ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ತನಿಖೆಗಾಗಿ ಕೇಂದ್ರ ಗೃಹ ಕಾರ್ಯದರ್ಶಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಕಾಲ್ ಡಾಟಾ ಇಂಟರ್ಸೆಪ್ಟ್ನಲ್ಲಿ ಹಿರಿಯ ಐಪಿಎಸ್ ಮತ್ತು ಐಪಿಎಸ್ ಅಲ್ಲದ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರುಗಳಿವೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪಡ್ನವಿಸ್ ಹೇಳಿದ್ದಾರೆ. ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಸೀತಾರಾಮ್ ಕುಂಟೆ ಅವರ ಅನುಮತಿಯ ನಂತರ ಫೋನ್ ಟ್ಯಾಪಿಂಗ್ ಮಾಡಲಾಗಿದೆ.
ಇಂಟರ್ಸೆಪ್ಟ್ ಕಾಲ್ ಡೇಟಾದ ವರದಿಯನ್ನು 2020 ರ ಆಗಸ್ಟ್ 25ರಂದು ಗುಪ್ತಚರ ಆಯುಕ್ತ ರಶ್ಮಿ ಶುಕ್ಲಾ ಅವರು ಪೊಲೀಸ್ ಮಹಾನಿರ್ದೇಶಕ(ಡಿಜಿ) ಸುಬೋಧ್ ಜೈಸ್ವಾಲ್ ಅವರಿಗೆ ಸಲ್ಲಿಸಿದರು, ಅವರು 2020ರ ಆಗಸ್ಟ್ 26ರಂದು ಎಸಿಎಸ್(ಗೃಹ)ಗೆ ಸಲ್ಲಿಸಿದರು.
ಡಿಜಿ ಅವರು, ತನ್ನ ಕವರಿಂಗ್ ಪತ್ರದಲ್ಲಿ ಇದನ್ನು ಮುಖ್ಯಮಂತ್ರಿಯ ಗಮನಕ್ಕೆ ತರಲು, ಹೆಸರಿಸಲಾದವರನ್ನು ಗುರುತಿಸಲು ಶಿಫಾರಸು ಮಾಡಿದ್ದು, ಸರ್ಕಾರಕ್ಕೆ ಅಪಖ್ಯಾತಿ ಉಂಟುಮಾಡುವುದನ್ನು ತಪ್ಪಿಸಲು ವರದಿಯ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕೇಳಿದ್ದರು, ಎಂದು ಫಡ್ನವಿಸ್ ಹೇಳಿದರು.
ಮುಖ್ಯಮಂತ್ರಿ ಜಿಎಡಿ ಉಸ್ತುವಾರಿ ವಹಿಸಿಕೊಂಡಿದ್ದರೂ ವರದಿಯ ಬಗ್ಗೆ ಕಾರ್ಯನಿರ್ವಹಿಸಲು ಏನೂ ಮಾಡಲಿಲ್ಲ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಉಸ್ತುವಾರಿಯಾದ್ದರಿಂದ, ನಾನು ವರದಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತೇನೆ, ಎಂದು ಅವರು ಹೇಳಿದರು.