ನಾನು ಒಂದುಸಲ ಎಡವಿದ್ದೇನೆ, ಮತ್ಯಾಕೆ ಸುಧಾಕರ್ ನನ್ನ ಹೆಸರು ತೊಗೊಂಡ್ರು? ಇಲ್ಲಿ ಯಾರೂ ಸತ್ಯಹರಿಶ್ಚಂದ್ರರಲ್ಲ! | Janata news
ಬೆಂಗಳೂರು : ಇಲ್ಲಿ ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯ ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಒಂದುಸಲ ಎಡವಿದ್ದೇನೆ ಅಂತ ಸದನದಲ್ಲೇ ಹೇಳಿದ್ದೇನೆ. ಮತ್ಯಾಕೆ ನನ್ನ ಹೆಸರನ್ನ ಸುಧಾಕರ್ ತೊಗೊಂಡ್ರು ಗೊತ್ತಾಗ್ತಿಲ್ಲ.
ನಾನು ಮಂತ್ರಿಗಳಿಗೆ ಹೇಳೋದು ಒಂದೇ.. ನೀವು ಕೋರ್ಟ್ಗೆ ಹೋಗಿ ಸ್ಟೇ ತರದೇ ಇದ್ರೆ ಇದೆಲ್ಲಾ ಆಗ್ತಿತ್ತಾ. ಭೂಮಿ ಮೇಲೆ ಹುಟ್ಟೋ ಪ್ರತಿಯೊಂದು ಜೀವಿಗೂ ಕೆಲವೊಂದು ಸಹಜ ಪ್ರಕ್ರಿಯೆ ಅಂತ ಇರುತ್ತೆ. ಅದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆ ವಿಚಾರದಲ್ಲಿ ರಾಡಿ ಯಾಕೆ ಎಳೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಇಲ್ಲಿರೋ ಎಲ್ಲರ ಮನೆ ದೋಸೆನೂ ತೂತು ಅಂತ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಬಂದ ನಂತರ ಇತ್ತೀಚೆಗೆ ಕೆಲವು ಘಟನೆಗಳನ್ನು ಮತ್ತೆ ಮತ್ತೆ ವೈಭವೀಕರಿಸಿ ಹೇಳುವ ಮೂಲಕ ಅವರ ಮುಖಕ್ಕೆ ಅವರೆ ಮಸಿ ಬಳಿದುಕೊಳ್ಳುತ್ತಿದ್ದಾರೆ. ನಾನು ಕೆಲ ದಿನಗಳ ಹಿಂದೆ ನಮ್ಮ ಕುಟುಂಬ ಇಂತಹ ವಿಷಯಗಳನ್ನಿಟ್ಟುಕೊಂಡು ಈ ರೀತಿ ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ.
ಹಾಗೆ ನಾನು ಒಂದು ಬಾರಿ ಎಡವಿದ್ದೆ ಎಂದು ಅಸಂಬ್ಲಿಯಲ್ಲಿ ಹೇಳಿಕೊಂಡಿದ್ದೆ. ನಾನು ಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ನೀವು ವೈಯಕ್ತಿಕವಾಗಿ ಮಾಡಿಕೊಂಡಿರುವ ತಪ್ಪಿಗೆ, ಬೇರೆ ಅವರನ್ನು ಬಲಿಪಶು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.