ಮಹಾರಾಷ್ಟ್ರ ಪೋಲಿಸ್ ಅಮಾನತುಗೊಂಡ ಸಚಿನ್ ವಾಜೆ ಎನ್ಐಎ ಕಸ್ಟಡಿಯನ್ನು ವಿಸ್ತರಿಸಿದ ನ್ಯಾಯಾಲಯ | Janata news
ಮುಂಬೈ : ವಿಶೇಷ ಎನ್ಐಎ ನ್ಯಾಯಾಲಯವು ಅಮಾನತುಗೊಂಡ ಮಹಾರಾಷ್ಟ್ರ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರ ಬಂಧನವನ್ನು ಏಪ್ರಿಲ್ 3, 2021 ರವರೆಗೆ ವಿಸ್ತರಿಸಿದೆ.
ಮಾರ್ಚ್ 13 ರಂದು ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ಆತನ ಮೇಲೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪವಿದೆ.
ನನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ, ಎಂದು ವಿಚಾರಣೆಯ ಸಮಯದಲ್ಲಿ ವಾಜೆ ನ್ಯಾಯಾಲಯಕ್ಕೆ ಹೇಳಿದ್ದಾರೆ. ಸ್ಫೋಟಕಗಳನ್ನು ಪತ್ತೆಹಚ್ಚಲಾದ ಎಸ್ಯುವಿ ಮಾಲೀಕತ್ವ ಹೊತ್ತಿದ್ದ ಮನ್ಸುಖ್ ಹಿರಾನ್ ಅವರೊಂದಿಗಿನ ಸಂಪರ್ಕಕ್ಕಾಗಿ ಸಚಿನ್ ವಾಜೆ ಅವರನ್ನು ಬಂಧಿಸಲಾಗಿತ್ತು.
ಇಂದು ವಿಶೇಷ ಕೋರ್ಟ್ ಗೆ ಎನ್ಐಎ ಪರ ಹಾಜರಾದ ಎಎಸ್ಜಿ ಅನಿಲ್ ಸಿಂಗ್ ಅವರು, ಇನ್ನೂ ಹೆಚ್ಚುವರಿ 15 ದಿನಗಳ ಕಾಲದ ವರೆಗೆ ವಾಜೆ ಅವರನ್ನು ವಶಕ್ಕೆ ಕೋರಿದರು.
ಮುಖೇಶ್ ಅಂಬಾನಿ ಮನೆ ಮುಂದೆ ಇಡಲಾಗಿದ್ದ ಸ್ಫೋಟಕ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಅವರ ಮನೆಯಲ್ಲಿ ಸಾಕಷ್ಟು ಪ್ರಮಾಣದ ಮದ್ದುಗುಂಡುಗಳ ಬಗ್ಗೆ ವಿವರಿಸಲಾಗಲಿಲ್ಲ ಮತ್ತು ಇದನ್ನು ಮತ್ತಷ್ಟು ಪ್ರಶ್ನಿಸಬೇಕು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ತಿಳಿಸಿದೆ.
ಶೋಧ ಕಾರ್ಯಾಚರಣೆ ವೇಳೆಗೆ ವಾಜೆ ಅವರ ನಿವಾಸದಿಂದ ಲೆಕ್ಕವಿಲ್ಲದ 62 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ, ಎಂದು ಅವರು ಹೇಳಿದರು. ಪ್ರತ್ಯೇಕವಾಗಿ, ಅವರಿಗೆ ಅಧಿಕೃತವಾಗಿ ನೀಡಲಾದ 30 ಗುಂಡುಗಳಲ್ಲಿ 25 ಕಾಣೆಯಾಗಿದೆ.
ವಾಜೆ ಅವರ ಕಾರಿನಿಂದ ಸಂಗ್ರಹಿಸಿದ ಮಾದರಿಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ, ಎಂದು ಸಿಂಗ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಒಬ್ಬ ಪೊಲೀಸ್ ಅಧಿಕಾರಿಯಾಗಿ ಸ್ಫೋಟಕಗಳನ್ನು ಇಡುವುದರಲ್ಲಿ ಭಾಗಿಯಾಗಿರುವುದು ಕಂಡುಬರುವುದರಿಂದ, ಇದು ಇಡೀ ದೇಶದ ಅತ್ಯಂತ ಭೀಕರ ಅಪರಾಧಗಳಲ್ಲಿ ಒಂದಾಗಿದೆ, ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ, ಎನ್ನಲಾಗಿದೆ.