ರಮೇಶ್ ಜಾರಕಿಹೊಳಿಯಿಂದ ಇಂದು ಸಂಜೆ ಮಹತ್ವದ ಮಾಹಿತಿ ಸ್ಫೋಟ! | Janata news
ಬೆಂಗಳೂರು : ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಅಜ್ಞಾತವಾಗಿದ್ದುಕೊಂಡೇ ಸಿಡಿ ಯುವತಿ ರಮೇಶ್ ಜಾರಕಿಹೊಳಿ ಆರೋಪಗಳಿಗೆ ವಿಡಿಯೋ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.
ಆಕೆ ತನ್ನ ಮನೆಯವರೊಂದಿಗೆ ಮಾತನಾಡಿದ್ದ ಆಡಿಯೋವೊಂದು ನಿನ್ನೆ ಲೀಕ್ ಆಗಿತ್ತು. ಅದರಲ್ಲಿ ಆಕೆ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.
ನಾನು ಇದನ್ನೆಲ್ಲ ಮೊದಲೇ ಊಹಿಸಿದ್ದೆ. ಇಂದಿನಿಂದ ನನ್ನ ಅಸ್ತ್ರ, ಆಟ ಶುರುವಾಗಲಿದೆ. ಈ ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ನನ್ನನ್ನು ನೇಣಿಗೇರಿಸಲಿ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಇಂದು ಮಹತ್ವದ ಮಾಹಿತಿ ರಿಲೀಸ್ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳು ಯಾರೆಂದು ಈಗಾಗಲೇ ನಾನು ಗೃಹಸಚಿವರಿಗೆ ತಿಳಿಸಿದ್ದೇನೆ. ಅವರ ಆಟ ಕೊನೆಯಾಗಿದ್ದು, ಇಂದಿನಿಂದ ನನ್ನ ಆಟ ಶುರುವಾಗಲಿದೆ ಎಂದು ಜಾರಕಿಹೊಳಿ ಹೇಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ.