ಬೇಗಂ, ಬಂಗಾಳವನ್ನು ಮಿನಿ-ಪಾಕಿಸ್ತಾನವನ್ನಾಗಿ ಮಾಡಲಿದ್ದಾರೆ : ಮಮತಾ ವಿರುದ್ಧ ಅಧಿಕಾರಿ ವಾಗ್ದಾಳಿ | Janata news
ಕೊಲ್ಕೊತ್ತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪರಸ್ಪರ ವಾಗ್ದಾಳಿ-ಪ್ರತಿದಾಳಿ ಪ್ರಕ್ರಿಯೆಯು ಮುಂದುವರೆದಿದ್ದು, ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವಾಗ *ಬೇಗಂ* ಬಂಗಾಳವನ್ನು ಮಿನಿ-ಪಾಕಿಸ್ತಾನವನ್ನಾಗಿ ಮಾಡಲಿದ್ದಾರೆ, ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಇಂದು ಸೋಮವಾರ ಆರೋಪಿಸಿ ವಾಗ್ದಾಳಿ ನಡೆಸಿದರು.
ಇಂದು ಸೋಮವಾರ ನಂದಿಗ್ರಾಮದ ಖೋದಂಬರಿಯಲ್ಲಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ ಅಧಿಕಾರಿ ಯವರು, ಬೇಗಂ ಇದ್ದಕ್ಕಿದ್ದಂತೆ ಬದಲಾಗಿದ್ದಾರೆ ಮತ್ತು ಚುನಾವಣೆಯಲ್ಲಿನ ಸೋಲಿನ ಭಯದಿಂದ, ಅವರು ಈಗ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ, ಎಂದು ಮಾಜಿ ಸಚಿವ ಅಧಿಕಾರಿ ಹೇಳಿದರು. ಖೋದಂಬರಿ ಪ್ರದೇಶದ ಕೆಲವೇ ದೂರದಲ್ಲಿ ಇಂದು ಮಮತಾ ಬ್ಯಾನರ್ಜಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸುವೆಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ನಂದಿಗ್ರಾಮ್ ವಿಧಾನಸಭಾ ಸ್ಥಾನದಲ್ಲಿ ನೇರ ಪ್ರತಿಸ್ಪರ್ಧಿ ಯಾಗಿದ್ದಾರೆ.
ಮಮತಾ ಬ್ಯಾನರ್ಜಿಗೆ ಈದ್ ಮುಬಾರಕ್ ಹೇಳುವ ಅಭ್ಯಾಸವಾಗಿ ಹೋಗಿದೆ ಮತ್ತು ಈ ಅಭ್ಯಾಸದಿಂದಾಗಿ, ಅವರು ಹೋಳಿ ಹಬ್ಬದ ಶುಭಾಶಯ ಹೇಳುವ ಬದಲು ಜನರಿಗೆ ಈದ್ ಮುಬಾರಕ್, ಎಂದು ಹೇಳುತ್ತಾರೆ. ಅವರಿಗೆ ಮತ ನೀಡಬೇಡಿ, ನೀವು ಬೇಗಂಗೆ ಮತ ಹಾಕಿದರೆ, ಬಂಗಾಳವು ಮಿನಿ-ಪಾಕಿಸ್ತಾನವಾಗುತ್ತದೆ, ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡನೇ ಹಂತದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ್ನಲ್ಲಿ ಏಪ್ರಿಲ್ 1 ಗುರುವಾರ ಚುನಾವಣೆ ನಡೆಯಲಿದೆ. ಆದ್ದರಿಂದ, ಮಮತಾ ಬ್ಯಾನರ್ಜಿ ಕೂಡ ತಮ್ಮ ಕ್ಷೇತ್ರದಲ್ಲೇ ಟಿಕಾಣಿ ಹೂಡಿದ್ದಾರೆ. ರಾಜ್ಯದ ಈ ಕ್ಷೇತ್ರವು ದೇಶಾದ್ಯಂತ ಅತ್ಯಂತ ಕುತೂಹಲಕಾರಿ ಮತ್ತು ಜಿದ್ದಾಜಿದ್ದಿನಿಂದ ಕೂಡಿದೆ. ಒಮ್ಮೆ ಮಮತಾ ಬ್ಯಾನರ್ಜಿಗೆ ತುಂಬಾ ಹತ್ತಿರವಾಗಿದ್ದ ಸುವೇಂಡು ಅಧಿಕಾರಿ, ಈಗ ಅವರು ತಮ್ಮ ಸಂಸದ ತಂದೆ ಮತ್ತು ಇತರರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದು, ಮಮತಾ ರನ್ನು ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.