ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು, ಸಿಸಿ ಕ್ಯಾಮರಾ ಹೊತ್ತೊಯ್ದ ಕಳ್ಳರು | Janata news
ಸುಳ್ಯ : ಸುಳ್ಯ ಪಟ್ಟಣದ ಖಾಸಗಿ ಬಸ್ಸು ನಿಲ್ದಾಣ ಬಳಿ ಇರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳ್ಳರು ನುಗ್ಗಿ ಚಿನ್ನ, ನಗದು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಇಂದು ಮುಂಜಾನೆ ಪೇಪರ್ ಏಜೆಂಟ್ ಪತ್ರಿಕೆ ಹಾಕಲು ಬಂದಾಗ ಜ್ಯುವೆಲ್ಲರಿಯ ಬೀಗ ಒಡೆದಿರುವುದು ಕಂಡುಬಂತೆನ್ನಲಾಗಿದೆ.
ವಿಷಯ ತಿಳಿದು ಅಂಗಡಿ ಮಾಲಕರು ಸ್ಥಳಕ್ಕಾಗಮಿಸಿ ಅಂಗಡಿ ತೆರೆದಾಗ ಸುಮಾರು 50 ಸಾವಿರ ರೂ. ನಗದು ಮತ್ತು 10 ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನ ಕಳವಾಗಿರುವುದಾಗಿ ಅಂಗಡಿ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
RELATED TOPICS:
English summary :Mangalore