ಸಿಡಿ ಇಟ್ಟುಕೊಂಡು ಎಂಎಲ್ ಸಿ, ಮಂತ್ರಿ ಆದವರಿಂದ ಕಲಿಯಬೇಕಾದದ್ದೇನಿಲ್ಲ: ಯತ್ನಾಳ್ | ಜನತಾ ನ್ಯೂಸ್
ವಿಜಯಪುರ: : ಮಂತ್ರಿಯಾಗಲು, ಎಂಎಲ್ ಸಿ ಆಗಲು ಅಶ್ಲೀಲ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವವರಿಂದ ನಾನು ಕಲಿಯಬೇಕಾದುದು ಏನೂ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರು ನಾಲಾಯಕರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಟಿಯವರ ಸಿಡಿ ಮಾಡಿದವರು ನಾಲಾಯಕರು. ಯಾರ್ಯಾರಿಗೆ ಸಪ್ಲೈಯರ್ ಆಗಿ ಇದ್ದಾರೋ ಅವರು ನಾಲಾಯಕರು ಎಂದು ಯತ್ನಾಳ್ ವಿರುದ್ಧ ಸಚಿವ ನಿರಾಣಿ ನಾಲಾಯಕ್ ಪದ ಬಳಕೆಗೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.
ನಾನು ಸಪ್ಲೈಯರ್ ಅಲ್ಲ, ಯಾರಿಗೂ ದುಡ್ಡು ಕೊಟ್ಟಿಲ್ಲ. ಮಂತ್ರಿಯಾಗಲು ಯಾರ ಕಾಲು ಹಿಡಿದಿಲ್ಲ, ಎಂಎಲ್ಸಿ ಆಗುವುದಕ್ಕೂ ನಾನು ಯಾರ ಕಾಲು ಹಿಡಿದಿಲ್ಲ. ಅಂತಹ ನಾಲಾಯಕರಿಂದ ನಾವು ಏನೂ ಕಲಿಯಲು ಸಾಧ್ಯವಿಲ್ಲ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂತ್ರಿ ಆಗಲು ನಾನು ಯಾರಿಗೂ ಹಣ ಕೊಟ್ಟಿಲ್ಲ, ಯಾರ ಕೈಕಾಲು ಹಿಡಿದಿಲ್ಲ. ಸಪ್ಲಾಯರ್ ಕೆಲಸ ಮಾಡಿಲ್ಲ. ಹೀಗಾಗಿ ಸಪ್ಲೈಯರ್ ಗಳಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ಕಿಡಿ ಕಾರಿದರು.