ಅನಂತ್ ಕುಮಾರ್ ಹೆಗಡೆ ಅನಾರೋಗ್ಯವನ್ನು ಟೀಕಿಸಿದ ಅಸ್ನೋಟಿಕರ್, ಅವರ ಇದ್ದರೆಷ್ಟು ಹೋದರೆಷ್ಟು? ಆನಂದ್ ಅಸ್ನೋಟಿಕರ್ | ಜನತಾ ನ್ಯೂಸ್
ಕಾರವಾರ : ಸಂಸದ ಅನಂತಕುಮಾರ ಹೆಗಡೆ ಸತ್ರೇನು, ಬದುಕಿದ್ರೇನು... ಏನೂ ಲೆಕ್ಕಕ್ಕಿಲ್ಲ. ಹೇಗೋ ಅವನು ಐದು ವರ್ಷ ನಮ್ಮ ದೃಷ್ಟಿಯಲ್ಲೇ ಇರಲ್ಲ. ಹೀಗಾಗಿ ಅವನ ಅನಾರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಅಂದು ಹಿಂದುತ್ವದ ಅಲೆ ಇದ್ದಿದ್ದರಿಂದ ಗೆಲುವು ಕಷ್ಟವಾಯಿತು. ಇದೀಗ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿ ಇರಲಿಲ್ಲ. ಶಸ್ತ್ರಚಿಕಿತ್ಸೆ ಆಗಿದೆ. ಗಂಭೀರ ಇದ್ದಾರೆ. ಮುಂದಿನ ರಾಜಕೀಯ ಜೀವನ ಕಷ್ಟ ಇದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಗೆ ಪ್ರಯತ್ನಿಸಿ ಎಂದು ಕೆಲವರು ನನಗೆ ಸಲಹೆ ನೀಡಿದ್ದರು. ಆದರೆ ಮೊನ್ನೆ ಜಾತ್ರೆಯಲ್ಲಿ ನೋಡಿದಾಗ ಅವರು ಗಟ್ಟಿಯೇ ಇದ್ದಾರೆ. ಹಾಗಾಗಿ ಈ ಸಲಹೆ ಕಷ್ಟ ಎಂದು ಹೆಗಡೆ ಅನಾರೋಗ್ಯವನ್ನು ಟೀಕಿಸಿದರು.
ಅನಂತ್ ಕುಮಾರ್ ಹೆಗ್ಡೆ ಮಲಗಿಬಿಟ್ಟ ಅಂತ ಅಂದುಕೊಂಡಿದ್ದೆವು, ಹೇಗೂ ಐದು ವರ್ಷ ಆತ ಯಾರಿಗೂ ಮುಖ ಕಾಣಿಸುವುದಿಲ್ಲ. ಹಾಗಾಗಿ ಆತನಿಗೆ ಹಂಡ್ರೆಡ್ ಪರ್ಸೆಂಟ್ ಏನೋ ಆಗಿರಬೇಕು. ಬೋನ್ ಕ್ಯಾನ್ಸರ್ ಆಗಿದೆ. ಅದಾಗಿದೆ, ಇದಾಗಿದೆ ಅಂತ ಎಲ್ಲಾ ರೀತಿಯ ಸುದ್ದಿ ಬರುತ್ತಿದೆ. ಆದ್ರೆ ನನಗೆ ಮನಸ್ಸಿಗೆ ನೋವಾಗಿಲ್ಲ. ಹೀಗೂ ಕಾಣುವುದಿಲ್ಲ, ಹೇಗೂ ಕಾಣುವುದಿಲ್ಲ. ಎಲ್ಲಾದರೂ ಹಿಂದೂ-ಮುಸ್ಲಿಂ ಗಲಾಟೆಯಾಗಬೇಕು. ಯಾರಾದ್ರೂ ಹಿಂದೂಗಳು ಸಾಯಬೇಕು. ಅಂತ ಸಂದರ್ಭದಲ್ಲಿ ಮಾತ್ರ ಅವರನ್ನು ಕಾಣಬಹುದು ಎಂದರು.
ಯಾರಾದರೂ ಮೀನುಗಾರ ಯುವಕ ಸಾಯ್ಬೇಕು, ಅಂಥ ಪ್ರಸಂಗದಲ್ಲಿ ಮಾತ್ರ ಅವನನ್ನು ಕಾಣಬಹುದು. ಹಾಗಾಗಿ ಅವನು ಸತ್ರೇನು, ಬದುಕಿದ್ರೇನು? ಅವನ ಆರೋಗ್ಯ ಹೇಗಿದ್ಯೋ ಏನೋ, ನನಗ್ಯಾಕೆ ಬೇಕು? ಜನ ಹೇಳಿದ್ದನ್ನು ಹೇಳಿದ್ದೀನಿ ಎಂದು ಏಕವಚನದಲ್ಲೇ ಹೆಗಡೆ ವಿರುದ್ಧ ಹರಿಹಾಯ್ದರು.
ಸಂಸದ ಹೆಗಡೆ ಅವರ ರಾಜಕೀಯ ನಿವೃತ್ತಿ ಹೇಳಿಕೆ ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕಾಗಿ ನೀಡಲಾಗಿದೆ. ಅವರ ನಿವೃತ್ತಿ ಸಾಧ್ಯವೇ ಇಲ್ಲ. ಮುಂದೆಯೂ ಅವರೇ ಚುನಾವಣೆಗೆ ಸ್ಪರ್ಧಿಸುತ್ತಾರೆ. ಜನರ ಬೆಂಬಲ ಇದ್ದರೆ ಪುನಃ ಗೆಲ್ಲುತ್ತಾರೆ. ಇಲ್ಲ ಎಂದರೆ ಚುನಾವಣೆ ಸಮಯದಲ್ಲಿ ಎಲ್ಲಾದ್ರು ಹಿಂದು ಹುಡುಗ ಅನುಮಾನವಾಗಿ ಸತ್ತರೆ ಅದಕ್ಕೆ ಬಣ್ಣ ಕಟ್ಟಿ ಕೋಮು ಗಲಭೆ ಎಬ್ಬಿಸಿ ಮತ್ತೆನಾದರೂ ಹವಾ ಸೃಷ್ಟಿ ಮಾಡುತ್ತಾರೆ ಎಂದರು.