ನೈತಿಕತೆಯಿಂದ ಅನಿಲ್ ದೇಶ್ಮುಖ್ ರಾಜೀನಾಮೆ : ಉದ್ಧವ್ ಠಾಕ್ರೆಗೆ ನೈತಿಕತೆ ಇಲ್ಲ - ಬಿಜೆಪಿ | ಜನತಾ ನ್ಯೂಸ್
ನವದೆಹಲಿ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ರಾಜೀನಾಮೆಯ ನಂತರ ಬಿಜೆಪಿ ಮಹಾರಾಷ್ಟ್ರ ಸರ್ಕಾರದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮೇಲೆ ತೀವ್ರ ದಾಳಿ ನಡೆಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಸೋಮವಾರ ಹೇಳಿದೆ.
ನಾವು ಮೊದಲಿನಿಂದಲೂ ನ್ಯಾಯಯುತ ವಿಚಾರಣೆಗೆ ಒತ್ತಾಯಿಸುತ್ತಿದ್ದೇವು. ಎಲ್ಲರೂ ಅನಿಲ್ ದೇಶ್ಮುಖ್ ಅವರ ರಾಜೀನಾಮೆಯನ್ನು ಕೇಳುತ್ತಿದ್ದಾರೆ, ಆದರೆ ಆಗ ಅವರು ನೀಡಿರಲಿಲ್ಲ, ಎಂದು ಹೇಳಿದರು.
ಈಗ, ಅನಿಲ್ ದೇಶ್ಮುಖ್ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಶರದ್ ಪವಾರ್ ಅವರ ಒಪ್ಪಿಗೆ ಕೇಳುವ ಮೂಲಕ ಹೊರತು, ಉದ್ಧವ್ ಠಾಕ್ರೆ ಅವರನ್ನಲ್ಲ. ಈ ಇಡೀ ಪ್ರಕರಣದಲ್ಲಿ ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದಾರೆ?, ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಅವರು ಪಕ್ಷದ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಅನಿಲ್ ದೇಶ್ಮುಖ್ ಹುದ್ದೆಯಲ್ಲಿ ಉಳಿದಿದ್ದರೆ ಈ ಸಂಪೂರ್ಣ ಪ್ರಕರಣದ ಬಗ್ಗೆ ಮುಂಬೈ ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯವಿಲ್ಲ, ಆದ್ದರಿಂದ ಸಿಬಿಐ ಈಗ ತನಿಖೆ ನಡೆಸಲಿದೆ, ಎಂದು ಅವರು ಹೇಳಿದರು. ಉದ್ಧವ್ ಠಾಕ್ರೆ ಅವರಿಗೆ ನೈತಿಕತೆ ಇದೆಯೋ ಇಲ್ಲವೋ? ಯಾಕೆಂದರೆ, ಅನಿಲ್ ದೇಶ್ಮುಖ್ ಹೇಳಿದ್ದಾರೆ, ರಾಜೀನಾಮೆ ಆಧಾರವೇ ನೈತಿಕತೆ, ಎಂದು. ಉದ್ಧವ್ ಠಾಕ್ರೆ ಅವರ ಮೇಲೂ ಪ್ರಶ್ನೆಗಳು ಉದ್ಭವಿಸಲಿವೆ, ಎಂದು ಪ್ರಸಾದ ಹೇಳಿದರು.
ಅನಿಲ್ ದೇಶಮುಖ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಿಮ್ಮ ಮೌನವೇಕೆ? ಉದ್ಧವ್ ಠಾಕ್ರೆ ಅವರು ಮೌನಕ್ಕೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ ಎಂದು ಕೇಂದ್ರ ಸಚಿವ ಹೇಳಿದ್ದಾರೆ.
ಸಚಿನ್ ವಾಜೆ ಒಬ್ಬ ಸಹಾಯಕ ಪೋಲಿಸ್ ಇನ್ಸ್ಪೆಕ್ಟರ್(ಎಪಿಐ)ಗೆ ಏಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು? ಅವರನ್ನು ಎಲ್ಲಾ ಅಪರಾಧ ತನಿಖೆಗಳ ಮುಖ್ಯಸ್ಥರನ್ನಾಗಿ ಮಾಡಲಾಯಿತು, ಯಾರನ್ನು 10-12 ವರ್ಷಗಳವರೆಗೂ ಅಮಾನತುಗೊಳಿಸಲಾಗಿತ್ತು,
ಅವರು ಶಿವಸೇನೆಗೆ ಸೇರಿದರು, ನಂತರ ಅವರನ್ನು ಪುನಃ ನೇಮಿಸಲಾಯಿತು. ನಾವು ಈ ಚುಕ್ಕೆಗಳನ್ನು ಒಂದಕ್ಕೊಂದು ಸೇರಿಸಿದರೆ, ಅದು ಲೂಟಿಯ ಪಿತೂರಿಯ ಕಡೆಗೆ ಸೂಚಿಸುತ್ತದೆ, ಇದರಲ್ಲಿ ವಾಜೆ ಸಾಮಾನ್ಯ ಅಂಶವಾಗಿದ್ದಾರೆ, ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.