ಸಚಿನ್ ವಾಜೆ ನ್ಯಾಯಾಂಗ ಬಂಧನ ಎಪ್ರಿಲ್ 26ರ ವರೆಗೆ ವಿಸ್ತರಿಸಿದ ಏನ್ಐಎ ಕೋರ್ಟ್ | ಜನತಾ ನ್ಯೂಸ್
ಮುಂಬೈ : ಅಮಾನತುಗೊಂಡಿರುವ ಕುಖ್ಯಾತ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವೇಜ್ ಅವರನ್ನು, ಎನ್ಐಎ ವಿಶೇಷ ನ್ಯಾಯಾಲಯವು ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮನೆಯ ಹೊರಗೆ ಪತ್ತೆಯಾದ ಸ್ಫೋಟಕ ತುಂಬಿದ ಎಸ್ಯುವಿ ಮತ್ತು ಆ ಎಸ್ಯುವಿ ಮಾಲೀಕರಾದ ಮನ್ಸುಖ್ ಹಿರೆನ್ ಸಾವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವಾಜೆ ಅವರನ್ನು ಬಂಧಿಸಿದೆ.
ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ ಪ್ರಕರಣದಲ್ಲೂ ಸಚಿನ್ ವಾಜೆ ಹೆಸರು ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೇಂದ್ರ ತನಿಖಾ ಸಂಸ್ಥೆ ಆರೋಪಿ ವಾಜೆಯನ್ನು ಈಗಾಗಲೇ ಸುಮಾರು ಒಂದು ತಿಂಗಳ ಕಾಲ ವಶದಲ್ಲಿರಿಸಿಕೊಂಡಿದೆ ಮತ್ತು ಆತನನ್ನು ನ್ಯಾಯಾಂಗ ಬಂಧನವನ್ನು ಮುಂದುವರಿಸುವಂತೆ ಎನ್ಐಎ ನ್ಯಾಯಾಲಯವನ್ನು ಕೇಳಿತು.
ವಾಜೆ ಅವರು ಅನೇಕ ಉನ್ನತ ಜನರ ಪ್ರಕರಣಗಳ ತನಿಖೆ ನಡೆಸಿದ್ದರಿಂದ ಜೈಲಿನಲ್ಲಿ ಅವರ ಜೀವಕ್ಕೆ ಅಪಾಯವಿದೆ, ಎಂದು ವಾಜೆ ಅವರ ವಕೀಲರು ಜೈಲಿನಲ್ಲಿ ಪ್ರತ್ಯೇಕ ಸುರಕ್ಷಿತ ಕೋಶವನ್ನು ಒದಗಿಸುವಂತೆ ನ್ಯಾಯಾಲಯವನ್ನು ಕೋರಿದರು ಮತ್ತು ನ್ಯಾಯಾಲಯವು ಇದಕ್ಕೆ ಒಪ್ಪಿಕೊಂಡಿತು.
ಮಾ.5 ರಂದು ಮನ್ಸುಖ್ ಹಿರೇನ್ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಎರಡೂ ಪ್ರಕರಣಗಳಲ್ಲಿ ಸಚಿನ್ ವಾಜೆ ಅವರ ಪಾತ್ರ ಇರುವುದು ಸಾಬೀತುಪಡಿಸಲು ಹಲವು ಸಾಕ್ಷ್ಯಗಳು ಲಭ್ಯವಾಗಿದ್ದವು.