ಮಂಗಳೂರಿನಲ್ಲಿ ಹೆದ್ದಾರಿ ದರೋಡೆ ಮಾಡುತ್ತಿದ್ದ 8 ಆರೋಪಿಗಳ ಬಂಧನ! | ಜನತಾ ನ್ಯೂಸ್
ಮಂಗಳೂರು : ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ ಎಂಟು ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ತೌಸಿರ್ ಯಾನೆ ಪತ್ತೊಂಜಿ ತೌಸಿರ್ (28), ಪುದು ನಿವಾಸಿ ಮೊಹಮ್ಮದ್ ರಫೀಕ್ (37), ಮೊಹಮ್ಮದ್ ಸಫ್ವಾನ್ ( 25), ಫರಂಗಿಪೇಟೆ ನಿವಾಸಿ ಮೊಹಮ್ಮದ್ ಅರಾಫತ್ (29), ತಸ್ಲಿಂ ( 27), ತುಂಬೆ ನಿವಾಸಿ ನಾಸೀರ್ ಹುಸೇನ್ ( 37), ಮೊಹಮ್ಮದ್ ಜೈನುದ್ದೀನ್ ( 24) ಮತ್ತು ಮೊಹಮ್ಮದ್ ಉನೈಜ್ (26) ಬಂಧಿತ ಆರೋಪಿಗಳಾಗಿದ್ದಾರೆ.
ರಾತ್ರಿ ಕರ್ಫ್ಯೂಗಾಗಿ ವಿಶೇಷ ಸುತ್ತುಗಳಲ್ಲಿದ್ದ ಸಿಸಿಬಿ ಪೋಲಿಸರು, ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಉಲೈಬೆಟ್ಟು ಬಳಿಯ ಪಾರಾರಿಯಲ್ಲಿ ವಾಹನಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಮಾರಕ ಆಯುಧಗಳನ್ನು ಹೊಂದಿದ್ದ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದಾರೆ
ಆರೋಪಿಗಳಿಂದ ಪೊಲೀಸರು ಎರಡು ಕತ್ತಿಗಳು, ಎರಡು ಚಾಕುಗಳು, ಒಂದು ಡ್ರ್ಯಾಗನ್ ಚಾಕು, ಎಂಟು ಮೊಬೈಲ್ ಫೋನ್, ಐದು ಮಂಕಿ ಕ್ಯಾಪ್, ಮೂರು ಪ್ಯಾಕೆಟ್ ಮೆಣಸಿನ ಪುಡಿ, ಮತ್ತು ಒಂದು ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಹಣಕಾಸಿನ ಸೆಟ್ಲ್ಮೆಂಟ್ ವ್ಯವಹಾರ ನಡೆಸುತ್ತಿದ್ದ ಈ ಗ್ಯಾಂಗ್, ಬಿ.ಸಿ.ರೋಡ್ ಮೆಲ್ಕಾರ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವ ಜಾವಿದ್ ಎಂಬಾತನಿಗೆ ತೌಸಿರ್ ಗ್ಯಾಂಗ್ನ ಸಫ್ವಾನ್ ಎಂಬಾತ 12 ಲಕ್ಷ ರೂ. ವ್ಯವಹಾರಕ್ಕಾಗಿ ನೀಡಿದ್ದು, ಇದನ್ನು ನೀಡದಿದ್ದಾಗ ಝಿಯಾದ್ನನ್ನು ಬೆಂಗಳೂರಿನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡಲು ಗ್ಯಾಂಗ್ ಸಂಚು ರೂಪಿಸಿತ್ತು ಎನ್ನಲಾಗಿದೆ.