ರಂಜಾನ್ ಆಚರಣೆಗೆ ಕೋವಿಡ್ ಮಾರ್ಗಸೂಚಿ ಬಿಡುಗಡೆ! | ಜನತಾ ನ್ಯೂಸ್
ಬೆಂಗಳೂರು : ರಂಜಾನ್ ಆಚರಣೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ರಾಜ್ಯದದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ರಂಜಾನ್ ಆಚರಣೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಸಾರ್ವಜನಿಕವಾಗಿ ಇಫ್ತಾರ್ ಕೂಟ ನಡೆಸುವಂತಿಲ್ಲ.
ನಮಾಜ್ಗೂ ಐದು ನಿಮಿಷ ಮೊದಲಷ್ಟೇ ಮಸೀದಿ ತೆರೆಯುವುದು.
ಅಗತ್ಯವಿದ್ದರೆ ಜುಮ್ಮಾ ನಮಾಜ್ನ ಸಮಯದಲ್ಲಿ ಮೂರು ಪಾಳಿ ಮಾಡಿಕೊಳ್ಳಬಹು.
ಉಪವಾಸ ಮುಗಿಸುವಾಗ ಕೂಡ ಮಸೀದಿಗೆ ಆಹಾರ ಪದಾರ್ಥಳನ್ನು ತರಬಾರದು.
ಮನೆಯಲ್ಲಿಯೇ ಉಪವಾಸ ಬಿಡಬೇಕು.
ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.
ಮಸೀದಿಗೆ ಬರುವಾಗ ಸರತಿ ಸಾಲಿನಲ್ಲಿಯೇ ಬರಬೇಕು.
ಮಾಸ್ಕ್ ಕಡ್ಡಾಯ.
ಪ್ರತಿ ಹೊತ್ತಿನ ನಮಾಜ್ ಬಳಿಕ ಸ್ಯಾನಿಟೈಸರ್ ಅಳವಡಿಕೆ ಕಡ್ಡಾಯ.
60 ವರ್ಷ ಮೇಲ್ಪಟ್ಟವರು, ಮಕ್ಕಳು ಮಸೀದಿಗೆ ಬರುವಂತಿಲ್ಲ.