ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಮೃತ! | ಜನತಾ ನ್ಯೂಸ್
ರಾಯಚೂರು : ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಮೃತಪಟ್ಟ ಘಟನೆ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲಕರಾಗಿಯಲ್ಲಿ ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿ ಲಿಂಗಸಗೂರು ತಾಲೂಕಿನ ಆನಂದಗಲ್ ಗ್ರಾಮದ ಈರಪ್ಪ ಮೇದನಾಪೂರ (25) ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾನೆ. ಕುರಿಗಾಯಿ ಜೊತೆ 17ಕ್ಕೂ ಅಧಿಕ ಕುರಿ ಹಾಗೂ ಮೇಕೆಗಳು ಬಲಿಯಾಗಿವೆ. ಮತ್ತೊಬ್ಬ ಕುರಿಗಾಯಿ ಕುಪ್ಪಣ್ಣನಿಗೆ ಗಂಭೀರ ಗಾಯವಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೇಡೆವು ಗ್ರಾಮದಲ್ಲಿ ಕುರಿ ಮೇಯಿಸಲು ತೆರಳಿದ್ದ ನಿಂಗರಾಜ(26) ಎನ್ನುವ ಕುರಿಗಾಹಿ ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾನೆ.
RELATED TOPICS:
English summary :Rayachuru