ಭೀಕರ ರಸ್ತೆ ಅಪಘಾತ : ಐವರು ಸ್ಥಳದಲ್ಲೇ ಸಾವು, ಐವರ ಸ್ಥಿತಿ ಗಂಭೀರ | ಜನತಾ ನ್ಯೂಸ್
ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಬಳಿ ಟಂಟಂ ಮತ್ತು ಟ್ಯಾಂಕರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಂಭವಿಸಿದ ಭೀಕರ ಅಪಘಾತದಲ್ಲಿ ಅಯ್ಯಮ್ಮ(60), ಶರಣಮ್ಮ(40), ಕಾಸಿಂ ಬಿ(40), ಭೀಮಾಬಾಯಿ(40), ದೇವೀಂದ್ರಮ್ಮ(70) ಮೃತಪಟ್ಟಿದ್ದಾರೆ.
ಮೃತರು ವಡಗೇರಿ ತಾಲೂಕಿನ ಮನಮುಟಗಿ ಗ್ರಾಮದವರು ಎನ್ನಲಾಗಿದ್ದು, ಟಂಟಂನಲ್ಲಿದ್ದ ಇನ್ನೈ ಐವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Accident in Yadagiri