ಕೋವಿಡ್ನಿಂದ ಮೃತಪಟ್ಟವರ ಶವಸಂಸ್ಕಾರ ಅವರ ಜಮೀನಿನಲ್ಲೇ ಮಾಡಲು ರಾಜ್ಯ ಸರ್ಕಾರ ಅನುಮತಿ | ಜನತಾ ನ್ಯೂಸ್
ಬೆಂಗಳೂರು : ಕರ್ನಾಟಕ ಸರ್ಕಾರವು ಕೋವಿಡ್ ನಿಂದ ಮೃತಪಟ್ಟವರ ಶವಗಳನ್ನು ಮೃತಪಟ್ಟವರ ಸಂಬಂಧಿಕರ ಒಡೆತನದ ಖಾಸಗಿ ಭೂಮಿಯಲ್ಲಿ ಹೂಳಲು ಅಥವಾ ಸುಡಲು ಅನುಮತಿಸಿದೆ.
ಮೃತರ ಜಮೀನನಲ್ಲೇ ಶವಸಂಸ್ಕಾರ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ R. ಅಶೋಕ್, DHO(ಜಿಲ್ಲಾ ಆರೋಗ್ಯಾಧಿಕಾರಿ)ಯಿಂದ ಅನುಮತಿ ಪಡೆದು ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನ ಅವರ ಜಮೀನಿನಲ್ಲೇ ನಡೆಸಬಹುದು ಎಂದರು.
ಅಂತ್ಯಸಂಸ್ಕಾರದ ವೇಳೆ ಮಾರ್ಗಸೂಚಿ ಉಲ್ಲಂಘಿಸುವಂತಿಲ್ಲ. ಪ್ರೋಟೋಕಾಲ್ ಪ್ರಕಾರವೇ ಶವಸಂಸ್ಕಾರ ಮಾಡಬೇಕು ಎಂದು ಅವರು ಸೂಚಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿದ ಹೊಸ ಸುತ್ತೋಲೆಯ ಪ್ರಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಮಾಸ್ಕ್ ಗಳನ್ನು ಧರಿಸಬೇಕು.ತರ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸತ್ತವರನ್ನು ಸ್ಪರ್ಶಿಸಲು ಅಗತ್ಯವಿರುವವರು ಪೂರ್ಣ ಪಿಪಿಇ ಕಿಟ್ ಮತ್ತು ಕೈಗವಸುಗಳನ್ನು ಧರಿಸುವುದು ಕಡ್ಡಾಯವಾಗಿದೆ.
ಕೋವಿಡ್ ಮೃತ ದೇಹಗಳನ್ನು ಸಾಗಿಸಲು ಬಳಸುವ ವಾಹನವನ್ನು ಶೇಕಡಾ ಒಂದು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿ ಸೋಂಕುರಹಿತಗೊಳಿಸಬೇಕಾಗುತ್ತದೆ.