ವಿವಾಹಿತೆಯನ್ನು ಪ್ರೀತಿ ಮಾಡಿ, ಕಲ್ಲಿನಿಂದ ಜಜ್ಜಿ ಕೊಲೆ! | ಜನತಾ ನ್ಯೂಸ್
ಹಾವೇರಿ : ವಿವಾಹಿತೆಯನ್ನು ಪ್ರೀತಿ ಮಾಡಿ, ಮದುವೆಯಾಗುವುದಾಗಿ ನಂಬಿಸಿದ ಪ್ರಿಯಕರನೇ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಹಾವೇರಿ ತಾಲ್ಲೂಕಿನ ಕರ್ಜಗಿ ಅರಣ್ಯದ ಸಮೀಪದ ಪಾಳು ಮನೆಯೊಂದರಲ್ಲಿ ನಡೆದಿದೆ.
ತಾಲ್ಲೂಕಿನ ಕೌದಿಕಲ್ಲಾಪುರ ಗ್ರಾಮದ ಶಿಲ್ಪಾ ಪ್ರಭು ಮೃತಪಟ್ಟ ಮಹಿಳೆ.
ಜನವರಿ ತಿಂಗಳಲ್ಲಿ ಶಿಲ್ಪಾ ಅವರನ್ನು ಪರಿಚಯ ಮಾಡಿಕೊಂಡು, ಪ್ರೀತಿಸುತ್ತೇನೆ ಎಂದು ಕರಬಸಪ್ಪ ನಂಬಿಸಿದ್ದ. ಬುಧವಾರ ಸಂಜೆ ಕರಬಸಪ್ಪ ಅವರನ್ನು ಹುಡುಕಿಕೊಂಡು ಅವರ ಮನೆಗೆ ಶಿಲ್ಪಾ ಹೋಗಿದ್ದರು. ನನ್ನನ್ನು ಮದುವೆಯಾಗು ಮತ್ತು ಹಣ ಕೊಡು ಎಂದು ಪದೇ ಪದೇ ಪೀಡಿಸುತ್ತಿದ್ದರು.
ಪ್ರೇಯಸಿ ಇದ್ದಕ್ಕಿದ್ದಂತೆ ಅದರಲ್ಲೂ ರಾತ್ರಿಯೇ ಮನೆಗೆ ಬಂದಿದ್ದರಿಂದ ವಿಚಲಿತನಾದ ಪ್ರೇಮಿ, ಆ ರಾತ್ರಿಯೇ ಆಕೆಯನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ. ಆದರೆ ಮಾರನೇ ದಿನ ಆಕೆ ಹಾವೇರಿ ತಾಲೂಕಿನ ಕರ್ಜಗಿ ಪಾರ್ಕ್ ಬಳಿ ಶವವಾಗಿ ಪತ್ತೆಯಾಗಿದ್ದಳು.
ರಾತ್ರಿ ಮನೆಗೆ ಬಂದಿದ್ದ ಪ್ರೇಯಸಿ ಶಿಲ್ಪಾ, ತನ್ನನ್ನು ಮದುವೆಯಾಗು ಹಾಗೂ ಹಣ ಕೊಡು ಎಂದು ಪದೇಪದೆ ಪೀಡಿಸುತ್ತಿದ್ದಳು. ಬುಧವಾರ ರಾತ್ರಿ ಆಕೆ ಹೇಳದೆ ಕೇಳದೆ ಮನೆಗೆ ಬಂದಿದ್ದಳು. ಹೀಗಾಗಿ ಆಕೆಯನ್ನು ರಾತ್ರಿ ಬೈಕ್ನಲ್ಲಿ ಕರೆದೊಯ್ದು, ಒಂಟಿ ಮನೆಯೊಂದರಲ್ಲಿ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಕರಬಸು ಪೊಲೀಸರಿಗೆ ತಿಳಿಸಿದ್ದಾನೆ.
ಆಕೆಯ ಪ್ರಿಯಕರ ಎತ್ತಿನಹಳ್ಳಿ ಗ್ರಾಮದ ಕರಬಸು ಕೋಡಿಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.