ಆಸ್ಪತ್ರೆ ಆವರಣದಲ್ಲೇ ಕರೊನಾ ಸೋಂಕಿತ ನೇಣಿಗೆ ಶರಣು! | ಜನತಾ ನ್ಯೂಸ್
ಮಂಡ್ಯ : ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬ ಆಸ್ಪತ್ರೆ ಆವರಣದಲ್ಲೇ ನೇಣಿಗೆ ಶರಣಾದ ಘಟನೆ ಶ್ರೀರಂಗಪಟ್ಟಣದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಜಯಕುಮಾರ್(45) ಮೃತ ಸೋಂಕಿತ ವ್ಯಕ್ತಿ. ಮೃತ ಜಯಕುಮಾರ್ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರು.
ಕರೊನಾ ದೃಢಪಟ್ಟಿದ್ರಿಂದ ನಿನ್ನೆ ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜಯಕುಮಾರ್ ಒಮ್ಮೆ ಆಕ್ಸಿಜನ್ ಪಡೆದಿದ್ದರು.
ಮತ್ತೆ ಉಸಿರಾಟದ ಸಮಸ್ಯೆ ಎದುರಾಗಿ ತಾನು ಸಾಯಬಹುದೆಂದು ತುಂಬಾ ಹೆದರಿದ್ದರು ಎನ್ನಲಾಗಿದೆ. ಕರೊನಾ ಮೇಲಿನ ಆತಂಕ ಹೆಚ್ಚಾಗಿ ಸೋಮವಾರ ಮುಂಜಾನೆ 4ರ ವೇಳೆ ಆಸ್ಪತ್ರೆಯ ಆವರಣದ ಹಿಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.