ಬಿರುಗಾಳಿ ಸಹಿತ ಭಾರೀ ಮಳೆಗೆ ಛಾವಣಿ ಹಾರಿ ಹೋಗಿ ಜೋಳಿಗೆಯಲ್ಲಿದ್ದ ಮಗು ಸಾವು | ಜನತಾ ನ್ಯೂಸ್
ವಿಜಯಪುರ : ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಛಾವಣಿ ಹಾರಿ ಹೋದ ಪರಿಣಾಮ ಜೋಳಿಗೆಯಲ್ಲಿದ್ದ ಮಗು ಸಾವನ್ನಪ್ಪಿದ ಘಟನೆ ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ರೆಹೆಮಾನ್ ಎಂಬುವರ 8 ತಿಂಗಳ ಮಗು ಮೃತಪಟ್ಟಿದೆ. ಬಿರುಗಾಳಿಯ ರಭಸಕ್ಕೆ ಮನೆಯ ಛಾವಣಿ ಹಾರಿ ಹೋಗಿ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿದ್ದ ಮಗು ಮೃತಪಟ್ಟಿದೆ.
ಮಗು ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿತ್ತು. ಬಿರುಗಾಳಿ ರಭಸಕ್ಕೆ ಹಾರಿ ಹೋದ ಈ ಛಾವಣಿಯೇ ಹಾರಿ ಹೋಗಿದೆ. ಅಲ್ಲದೆ ವಿದ್ಯುತ್ ಕಂಬಕ್ಕೆ ಸಿಲುಕಿ ಮಗು ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
English summary :Vijaypura