ಕೋವಿಡ್ ಎದುರಿಸಲು ರಾಜ್ಯ ಸರ್ಕಾರಗಳಿಗೆ ಭಾರತೀಯ ಭೂಸೇನೆಯ ಸಹಾಯದ ಕುರಿತು ಪರಿಶೀಲಿಸಿದ ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶ ಎದುರಿಸುತ್ತಿರುವ ಕೋವಿಡ್ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಭೂಸೇನೆಯ ಸಹಾಯ ಮತ್ತು ವಿವಿಧ ಕಾರ್ಯಾಚರಣೆ ಕುರಿತು ಪರಿಶೀಲಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸಹಾಯ ಮಾಡಲು ಸೇನೆಯು ತೆಗೆದುಕೊಳ್ಳುತ್ತಿರುವ ವಿವಿಧ ಕಾರ್ಯಾಚರಣೆಗೆಳ ಬಗ್ಗೆ ಅವರು ಪರಿಶೀಲಿಸಿದ್ದಾರೆ, ಎಂದು ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.
ಸೇನೆಯ ವೈದ್ಯಕೀಯ ಸಿಬ್ಬಂದಿಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ಲಭ್ಯಗೊಳಿಸಲಾಗಿದೆ, ಎಂದು ಜನರಲ್ ನರವಣೆ ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು. ದೇಶದ ವಿವಿಧ ಭಾಗಗಳಲ್ಲಿ ಸೈನ್ಯ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುತ್ತಿದೆ, ಎಂದು ಅವರು ಪ್ರಧಾನ ಮಂತ್ರಿಗೆ ವಿವರಿಸಿದರು.
ಸೈನ್ಯವು ನಾಗರಿಕರಿಗಾಗಿ ಸಾಧ್ಯವಾಡೆದೆಯೆಲ್ಲಾ ಆಸ್ಪತ್ರೆಗಳನ್ನು ಸ್ಥಾಪಿಸಲು ಸಿದ್ಧವಾಗಿದೆ, ಎಂದು ಜನರಲ್ ನರವಣೆ ಪ್ರಧಾನಿ ಮೋದಿಯವರಿಗೆ ತಿಳಿಸಿದರು ಮತ್ತು ಜನರು ತಮ್ಮ ಹತ್ತಿರದ ಸೇನಾ ಆಸ್ಪತ್ರೆಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದರು.
ಆಮದು ಮಾಡಿದ ಟ್ಯಾಂಕರ್ಗಳು ಮತ್ತು ವಾಹನಗಳನ್ನು ನಿರ್ವಹಿಸಲು ಸೈನ್ಯವು ತನ್ನ ಸೇನಾಶಕ್ತಿಯಿಂದ ಸಹಾಯ ಮಾಡುತ್ತಿದೆ, ಎಂದು ಸೇನಾ ಮುಖ್ಯಸ್ಥ ಜನರಲ್ ಅವರು ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು.
ಭಾರತವು ಪ್ರಸ್ತುತ ಕರೋನವೈರಸ್ ಕಾಯಿಲೆ(ಕೋವಿಡ್ -19) ಸೋಂಕಿನ ಎರಡನೇ ತರಂಗದೊಂದಿಗೆ ಹೋರಾಡುತ್ತಿದೆ ಮತ್ತು ಹಲವಾರು ರಾಜ್ಯ ಸರ್ಕಾರಗಳು ಆಸ್ಪತ್ರೆಗಳ, ವೈದ್ಯಕೀಯ ಆಮ್ಲಜನಕ ಮತ್ತು ಔಷದಿಗಳ ನಿರ್ವಹಣೆಯಿಂದ ತತ್ತರಿಸುತ್ತಿವೆ.
ಭಾರತವು ಗುರುವಾರ 3,79,257 ತಾಜಾ ಕೋವಿಡ್-19 ಸೋಂಕುಗಳನ್ನು ದಾಖಲಿಸಿದೆ ಮತ್ತು 24 ಗಂಟೆಗಳಲ್ಲಿ 3,645 ಸಾವುಗಳು ದಾಖಲಾಗಿವೆ.