ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಹೆತ್ತವರ ಸಾವು | ಜನತಾ ನ್ಯೂಸ್
ಮಂಡ್ಯ: : ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ತಂದೆ-ತಾಯಿ ಮಗನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ಮನಕಲಕುವ ಘಟನೆಯೊಂದು ನಡೆದಿದೆ.
ಕೊವಿಡ್ ಸೋಂಕಿಗೆ 54 ವರ್ಷದ ತಮ್ಮಯ್ಯಚಾರಿ ಬಲಿಯಾಗಿದ್ದು, ಮಗನ ಸಾವಿನ ಸುದ್ದಿ ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂಬುದನ್ನ ಅರಿತ ಸಂಬಂಧಿಕರು ಅವಗೆ ಗೊತ್ತಾಗದಂತೆ ತಾವೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿ ಬಂದಿದ್ದರು.
3 ದಿನ ಹಿಂದೆ ಕೊವಿಡ್ಗೆ ತಮ್ಮಯ್ಯಚಾರಿ ಬಲಿಯಾಗಿದ್ದರು. ಈ ಸುದ್ದಿ ಕೇಳಿ ಆಘಾತದಿಂದ ತಾಯಿ ಜಯಮ್ಮ(74) ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಪತಿ ಕೆಂಪಚಾರಿ (84) ಕೂಡ ಸಾವನ್ನಪ್ಪಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ತಮ್ಮಯ್ಯಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೂರು ದಿನಗಳ ಹಿಂದೆಯೇ ತಮ್ಮಯ್ಯಚಾರಿ ಮೃತಪಟ್ಟಿದ್ದರು.
ಮಗ ಸತ್ತು ಮೂರು ದಿನದ ಬಳಿಕ ಅಂದ್ರೆ ನಿನ್ನೆ ಮಗನ ಸಾವಿನ ವಿಚಾರ ಆತನ ತಂದೆ ತಾಯಿಗೆ ಸಂಬಂಧಿಕರು ತಿಳಿಸಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತದಿಂದ ತಾಯಿ ಜಯಮ್ಮ ಬಳಿಕ ತಂದೆ ಕೆಂಪಚಾರಿ ಮೃತಪಟ್ಟಿದ್ದಾರೆ.